ನೈಸ್ : ದೇವೇಗೌಡರಿಗೆ ಒಂದು ಸುತ್ತಿನ ಜಯ
ಬೆಂಗಳೂರು,
ಜೂ. 30 : ನೈಸ್ ಕಂಪನಿಗೆ ಹೆಚ್ಚುವರಿಯಾಗಿ 776 ಎಕರೆ ಭೂಮಿ ನೀಡದಿರಲು ಸರಕಾರ ನಿರ್ಧರಿಸಿ ಸುಪ್ರಿಂಕೋರ್ಟ್ ಗೆ ಮಂಗಳವಾರ ಪ್ರಮಾಣ ಪತ್ರ ಸಲ್ಲಿಸಿದೆ. ಸರಕಾರದ ಈ ನಿರ್ಧಾರದ ನೈಸ್ ವಿವಾದ ತಣ್ಣಗಾಗುವ ಸಾಧ್ಯತೆಯಿದ್ದು, ಮಾಜಿ ದೇವೇಗೌಡರಿಗೆ ಹೋರಾಟಕ್ಕೆ ಒಂದು ಸುತ್ತಿನ ಜಯ ಸಿಕ್ಕಂತಾಗಿದೆ. id="toptextpromo">ಸಿಎಂ
ಯಡಿಯೂರಪ್ಪ ನೇತೃತ್ವದ ಉನ್ನತ ಮಟ್ಟದ ಸಮಿತಿ ಕಳೆದ ರವಿವಾರ ಸಭೆ ಸೇರಿ ಸಂಸ್ಥೆಗೆ ಹೆಚ್ಚುವರಿ ಭೂಮಿ ನೀಡದಿರಲು ನಿರ್ಣಯಿಸಿದೆ. ಸಮಿತಿ ಕೈಗೊಂಡಿರುವ ನಿರ್ಣಯ ಕುರಿತು ಸುಪ್ರಿಂಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಲಾಯಿತು ಎಂದು ಅಡ್ವೋಕೇಟ್ ಜನರಲ್ ಕಚೇರಿ ಮೂಲಗಳು ತಿಳಿಸಿವೆ. 2004ರ ಒಪ್ಪಂದ ಪ್ರಕಾರ ಸರಕಾರ 776 ಎಕರೆ ಭೂಮಿ ನೀಡಬೇಕಿತ್ತು. ಮೂಲ ಒಪ್ಪಂದ ಉಲ್ಲಂಘಿಸಿ ನೈಸ್ ಸಂಸ್ಥೆಗೆ ಹೆಚ್ಚುವರಿಯಾಗಿ ಭೂಮಿ ನೀಡದಂತೆ ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ರೈತ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದವು. id='are-slot-1' class='oiad oi-axt oiadv'> id='top-searched-articles'>2004ರ
ಪ್ರಕಾರ ಸರಕಾರ ಭೂಮಿ ನೀಡಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿ ನೈಸ್ ಸಂಸ್ಥೆ ಸುಪ್ರಿಂಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ವಿಭಾಗೀಯ ಪೀಠ ಒಪ್ಪಂದದ ಪ್ರಕಾರ ಸಂಸ್ಥೆಗೆ ಭೂಮಿ ನೀಡುವಂತೆ ಸೂಚನೆ ನೀಡಿತ್ತು.











Click it and Unblock the Notifications