ಶೂಟೌಟ್ ನಲ್ಲಿ ಶರಣಾದ ಸಮುರಾಯ್ ಗಳು

ನಿಗದಿತ 90 ನಿಮಿಷಗಳಲ್ಲಿ ಗೋಲು ಗಳಿಸಲು ಎರಡು ತಂಡಗಳು ಹೆಣಗಾಡಿದ ಮೇಲೆ ಹೆಚ್ಚುವರಿ 30 ನಿಮಿಷಗಳಲ್ಲೂ ಗೋಲು ಬರದಿದ್ದಾಗ,ಈ ವಿಶ್ವಕಪ್ ನ ಪ್ರಥಮ ಪೆನಾಲ್ಟಿ ಶೂಟೌಟ್ ಗೆ ವ್ಯವಸ್ಥೆ ಸಿದ್ಧವಾಯಿತು. ಎರಡು ತಂಡಗಳಿಗೂ ಇದ್ದದ್ದು ಐದು ಬಾರಿ ಗೋಲು ಗಳಿಸುವ ಅವಕಾಶ. ರೋಚಕತೆಗೆ ಸಾಕ್ಷಿಯಾದ ಪೆನಾಲ್ಟಿ ಶೂಟೌಟ್ ನಲ್ಲಿ ಪೆರುಗ್ವೆ 5-3 ಅಂತರದಲ್ಲಿ ಜಪಾನ್ ಅನ್ನು ಮಣಿಸಿ ಬೀಗಿತು.
ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ ||
ಜಪಾನ್ ಸೂರ್ಯ ಮುಳುಗಿದ್ದು ಹೇಗೆ: ಡಿಫೆಂಡರ್ ಕೊಮಾನೊ ಸಮುರಾಯ್ ಗಳ ಪಾಲಿಗೆ ದುರಂತ ನಾಯಕನಾಗಿಬಿಟ್ಟ. ಕೊಮಾನೊ ಗೋಲು ಹೊಡೆದ ಚೆಂಡು ಗೋಲ್ ಬಾಕ್ಸ್ ನ ಅಂಚಿಗೆ ತಾಗಿ ಹೊರ ಚಿಮ್ಮಿದಾಗ ಜಪಾನ್ ತಂಡಕ್ಕೆ ಆಘಾತವಾಗಿತ್ತು. ಅಗ ಜಪಾನ್ ಗೌರವ ಉಳಿಸುವ ಹೊಣೆ ಗೋಲಿ ಕವಾಷಿಮಾ ಮೇಲಿತ್ತು. ಆದರೆ, ಒಂದೂ ಗೋಲನ್ನು ತಡೆಯಲಾಗದೆ ಐದು ಗೋಲನ್ನು ಬಾಕ್ಸ್ ಒಳಬಿಟ್ಟ ಕವಾಷಿಮಾ ಕಂಬನಿಗೆರೆದಿದ್ದಷ್ಟೆ ಬಂತು.
ಪೆರುಗ್ವೆ ಪರ ಎಡ್ಗರ್ ಬರೆಟೊ, ಲುಕಸ್ ಬಾರಿಯೊಸ್, ಕ್ರಿಸ್ಟಿಯನ್ ರೆವೆರೊ, ನೆಲ್ಸನ್ ವಾಲ್ಡೇಸ್ ಗೋಲು ಗಳಿಸಿದ್ದರು. ಅಂತಿಮವಾಗಿ ಎಡಗಾಲಿನ ಕಿಕ್ ಗೆ ಪ್ರಸಿದ್ಧಿಯಾದ ಆಸ್ಕರ್ ಕಾರ್ಡೋಸ್ ಗೋಲು ಗಳಿಸಿ ಪೆರುಗ್ವೆಯ ಐತಿಹಾಸಿಕ ಹೀರೋ ಆದರು. ಜಪಾನ್ ಪರ ಕೊಮೊನೊಗೂ ಮೊದಲು ಎಂಡೋ, ಹಸೆಬೆ ಗೋಲು ಗಳಿಸಿದ್ದರು. ನಂತರ ಕೈಸುಕಿ ಹೋಂಡಾ ಗೋಲು ದಾಖಲಿಸಿದರು.
ಕೈಸುಕಿ ಹೋಂಡಾರಂತಹ ಉತ್ತಮ ಸ್ಟ್ರೈಕರ್ ಹೊಂದಿದ್ದ ಜಪಾನ್ ಪೆನಾಲ್ಟಿ ಶೂಟೌಟ್ ನಲ್ಲಿ ಗೆಲ್ಲುವ ನಿರೀಕ್ಷೆ ಎಲ್ಲರಲ್ಲಿತ್ತು. ಆದರೆ, ಆದದ್ದೇ ಬೇರೆ ಪೆರುಗ್ವೆ ಪ್ರಪ್ರಥಮ ಬಾರಿಗೆ ಕ್ವಾಟರ್ ಫೈನಲ್ ಹಂತ ತಲುಪಿದ ಸಾಧನೆ ಮೆರೆಯಿತು. ಜು.3 ರಂದು ಜೋಹಾನ್ಸ್ ಬರ್ಗ್ ನಲ್ಲಿ ನಡೆಯುವ ಕ್ವಾಟರ್ ಫೈನಲ್ಸ್ ನಲ್ಲಿ ಪೆರುಗ್ವೆ ತಂಡ ಪ್ರಬಲ ಸ್ಪೇನ್ ತಂಡವನ್ನು ಎದುರಿಸಲಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications