ಕೆಂಪು ಅಂಗಿ ಚಡ್ಡಿ ಇಂಗ್ಲೀಷರಿಗೆ ಜಯ ತರಬಲ್ಲದೇ?
ಸಾಮಾನ್ಯವಾಗಿ ಒಮ್ಮೆ ಗೆದ್ದ ತಂಡವನ್ನು ಮುಂದಿನ ಪಂದ್ಯಕ್ಕೆ ಬದಲಿಸದೆ ಹಾಗೆ ಮುಂದುವರೆಸಲಾಗುತ್ತದೆ. ಆದರೆ, ಇಂಗ್ಲೆಂಡ್ ನ ನಂಬಿಕೆಯೊ, ಮೂಢತೆಯೊ ಗೆದ್ದಾಗ ತೊಟ್ಟ ಅಂಗಿ ಚಡ್ಡಿಯ ಬಣ್ಣವೇ ಇರಲಿ ಎಂದು ತೀರ್ಮಾನಿಸಿದ್ದಾರೆ. ಇಂಗ್ಲೀಷರು ಮೈದಾನಕ್ಕೆ ಹೇಗೆ ಇಳಿಯಲಿ ನಮಗೇನೂ ಭಯವಿಲ್ಲ ಎಂದು ಜರ್ಮನಿಯ ಮೇರು ಆಟಗಾರ ಪೊಡೊಲಸ್ಕಿ ಹೇಳಿದ್ದಾರೆ.
ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ ||
ಹಳೆ ವೈರಿಗಳ ಕದನಕ್ಕೆ ಬ್ಲೊಮ್ ಫೌಟೇನ್ ಮೈದಾನ ಅಣಿಯಾಗಿದ್ದು, ಜೂ.27 ರ ಮಧ್ಯರಾತ್ರಿ ಕೆಂಪು ಕಪ್ಪು ದಿರಿಸಿನ ಯೋಧರ ಕಾಳಗ ರೋಮಾಂಚನಕಾರಿಯಾಗಲಿದೆ. ವಿಶ್ವಕಪ್ ಆರಂಭದಲ್ಲಿ ಎಲ್ಲರ ಕಣ್ಣು ವೇಯ್ನ್ ರೂನಿ ಮೇಲಿತ್ತು. ಆದರೆ, ಈಗ ಜೆರಾರ್ಲ್ಡ್ ಹಾಗೂ ಡೆಫೋ ಮೇಲೆ ತಿರುಗಿದೆ. ಜರ್ಮನಿಯ ತಂಡಕ್ಕೆ ಕ್ಲೋಸ್ ಮರಳುವ ಸಾಧ್ಯತೆಯಿದ್ದು, ಪೊಡಲಸ್ಕಿ ಜೊತೆ ಆಕ್ರಮಣಕಾರಿ ಆಟ ಆಡಲಿದ್ದಾರೆ.
ವಿಶ್ವಕಪ್ ಇತಿಹಾಸಲ್ಲಿ ಜರ್ಮನಿ ವಿರುದ್ಧ ಇಂಗ್ಲೆಂಡ್ ಉತ್ತಮ ಫಲಿತಾಂಶ ಹೊಂದಿದ್ದರೂ, ಪ್ರಸಕ್ತ ಟೂರ್ನಿಯಲ್ಲಿ ಜರ್ಮನಿ ತನ್ನ ಸಹಜ ಆಟದಿಂದ ಪಂದ್ಯದಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆಯಿದೆ, ಇಂಗ್ಲೆಂಡ್ ರಕ್ಷಣಾ ಪಡೆ ಸಶಕ್ತವಾಗಿದ್ದರೂ, ಜಮರ್ನಿಯನ್ನು ಮಣಿಸಬೇಕಾದರೆ ರೂನಿ, ಜೆರಾಲ್ಡ್ ,ಲ್ಯಾಂಪರ್ಡ್ ಘನತೆಗೆ ತಕ್ಕ ಆಟ ಆಡಲೇಬೇಕಾಗಿದೆ.
ವಿಡಿಯೋಗಳು : ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ ||
ಆಸೀಸ್ ವಿರುದ್ಧ ಭರ್ಜರಿ ಆಟವಾಡಿದ್ದ ಜರ್ಮನ್ನರು, ಸೆರ್ಬಿಯಾ ವಿರುದ್ಧ ಸೋತು ಸ್ವಲ್ಪ ಆತ್ಮವಿಶ್ವಾಸ ಕಳೆದುಕೊಂಡರೂ, ಘಾನಾ ವಿರುದ್ಧ ಓಜೆಲ್ ಉತ್ತಮ ಆಟ ಪ್ರದರ್ಶಿಸಿದ್ದು, ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಂತಾಗಿದೆ. ಲಾಹ್ಮ್,ಪೊಡಲ್ ಸ್ಕಿ, ಕ್ಲೊಸ್ ವುಳ್ಳ 4-5-1ಮಾದರಿ ಆಕ್ರಮಣಕಾರಿ ರಚನೆಯೊಂದಿಗೆ ಜರ್ಮನಿ ಇಳಿಯುವ ಸಾಧ್ಯತೆಯಿದೆ.
ಪಂದ್ಯದ ಆರಂಭ ಹಂತದಲ್ಲಿ ಗೋಲು ಗಳಿಸುವ ತಂಡಕ್ಕೆ ಮೇಲುಗೈ ಸಾಧಿಸುವ ಎಲ್ಲಾ ಅವಕಾಶ ಲಭ್ಯವಾಗಲಿದೆ. ಹಾಗಾಗಿ, ಜರ್ಮನಿ 2-1 ಅಂತರದಿಂದ ಮುಂದುವರೆಯುವ ಸಾಧ್ಯತೆ ಇದೆ ಎನ್ನುತ್ತಾರೆ ಬುಕ್ಕಿಗಳು. ಇಂಗ್ಲೆಂಡ್ ಗೆಲ್ಲಲು ಸಂಘಟಿತ ಹೋರಾಟ ಅಗತ್ಯ. ಕೆಪೆಲೋ ನಿರ್ಧರಿಸುವ ಕಾಂಬಿನೇಷನ್ ಹಾಗೂ ಗೇಮ್ ಪ್ಲಾನ್ (4-4-2)ಕುತೂಹಲ ಹುಟ್ಟಿಸಿದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ













Click it and Unblock the Notifications