ಹೋರಾಡುತ್ತಲೇ ಜೈಲು ಸೇರುವೆ; ದೇವೇಗೌಡ

ಬೊಮ್ಮೇಗೌಡ, ರಾಮೇಗೌಡರ ಭೂಮಿಯನ್ನು ನೈಸ್ ಸಂಸ್ಥೆಗೆ ನೀಡುತ್ತಿಲ್ಲ. ದೇವೇಗೌಡ ಅಥವಾ ಅವರ ಅಪ್ಪನ ಜಮೀನಾಗಲಿ, ಮುಖ್ಯಮಂತ್ರಿಗಳ ಪಿತ್ರಾರ್ಜಿತ ಆಸ್ತಿಯನ್ನು ನೀಡುತ್ತಿಲ್ಲ. ಇದು ರೈತರ ಫಲವತ್ತಾದ ಜಮೀನನ್ನು ನೈಸ್ ಗೆ ನೀಡುತ್ತಿರುವುದು. ದಾವೂದ್ ಇಬ್ರಾಹಿಮ್ ನನ್ನು ಮೀರಿಸುವಷ್ಟು ದೊಡ್ಡ ಡಾಕೂ ಆ ಖೇಣಿ, ಅಗತ್ಯಕ್ಕಿಂತ ಹೆಚ್ಚು ಜಮೀನು ನೀಡುವಂತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿದ್ದ ಮಹಾನುಭಾವನಿಗೆ ಹೆಚ್ಚುವರಿ ಜಮೀನು ಏಕೆ ಎಂದು ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಉನ್ನತ ಮಟ್ಟದ ಸಭೆಯಲ್ಲಿ ನೈಸ್ ಸಂಸ್ಥೆಗೆ ಹೆಚ್ಚುವರಿ ಜಮೀನು ನೀಡುವ ಪ್ರಸ್ತಾಪ ಕೈಗೊಂಡಿದ್ದರೆ ಅದು ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆ. ಮತ್ತೆ ನಡೆಯಲಿರುವ ಸಭೆಯಲ್ಲಿ ಒಂದು ವೇಳೆ ಈ ಬಗ್ಗೆ ಏಕಪಕ್ಷೀಯ ನಿರ್ಧಾರ ಕೈಗೊಂಡರೆ ರೈತರ ಜೊತೆಗೂಡಿ ಹೋರಾಟ ನಡೆಸುತ್ತೇನೆ ಎಂದು ಮಾಜಿ ಪ್ರಧಾನಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications