ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಲ್ಲರ ಕಣ್ಣು, ಕ್ಯಾಮೆರಾ ಯಡಿಯೂರಪ್ಪ ಮೇಲೆ
ಟಿವಿ, ಮುದ್ರಣ ಮಾಧ್ಯಮ, ಅಂತರ್ ಜಾಲ ಮಾಧ್ಯಮದ ಪ್ರತಿನಿಧಿಗಳು ಮುಖ್ಯಮಂತ್ರಿಗಳು ಮಾಡಬಹುದಾದ ಪ್ರಕಟಣೆಗಳು ಮತ್ತು ಲೋಕಾಯುಕ್ತರ ರಾಜೀನಾಮೆಯಿಂದ ಉದ್ಭವಿಸಿರುವ ಸಮಸ್ಯೆಗಳಿಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆಂಬದುದರ ಮೇಲೆ ಎಲ್ಲರ ಕಣ್ಣ ಮತ್ತು ಕ್ಯಾಮಾರಾ ಇರುತ್ತದೆ.
ಇದಲ್ಲದೆ, ಭಾಜಪ ಸರಕಾರ ಎರಡು ವರ್ಷ ಪೂರೈಸಿರುವ ಸಂದರ್ಭದಲ್ಲಿ ಪಕ್ಷ ಆಚರಿಸಲು ಉದ್ದೇಶಿಸಿರುವ ವಿಜಯೋತ್ಸವದ ಬಗ್ಗೆಯೂ ಯಡ್ಡಿ ವಿವರಣೆ ನೀಡುವ ನಿರೀಕ್ಷೆಯಿದೆ. ಮಂತ್ರಿಮಂಡಲ ಪುನಾರಚನೆಯ ಗುಮ್ಮ ಮತ್ತು ದಂಡಪಿಂಡ ಮಂತ್ರಿಗಳನ್ನು ಹೊರದಬ್ಬಿ ಹೊಸ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಪತ್ರಿಕಾ ಸಂದರ್ಶನದಲ್ಲಿ ಪ್ರಶ್ನೆಗಳು ಮತ್ತು ನುಣಿಚಿಕೊಳ್ಳುವ ಉತ್ತರಗಳನ್ನು ಓದಲು ನೀವು ಸಿದ್ದರಾಗಿ.
Story first published: Thursday, June 24, 2010, 10:58 [IST]