ನಿತ್ಯಾನಂದ ಟ್ರಸ್ಟ್ ಗಳ ಬ್ಯಾಂಕ್ ವ್ಯವಹಾರ ಸುಗಮ

ರಾಸಲೀಲೆ ಪ್ರಕರಣದ ನಂತರ ನಿತ್ಯಾನಂದ ಟ್ರಸ್ಟ್ ಗೆ ಸೇರಿದ್ದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಇದನ್ನು ವಿರೋಧಿಸಿ ಟ್ರಸ್ಟ್ ನವರು ಹೈಕೋರ್ಟ್ ಮೆಟ್ಟಿಲೇರಿದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಅಜಿತ್ ಜೆ ಗುಂಜಾಲ್ ಅವರಿದ್ದ ಪೀಠ ಮೇಲಿನಂತೆ ಆದೇಶ ನೀಡಿ ಪ್ರಕರಣವನ್ನು ಇತ್ಯರ್ಥಪಡಿಸಿದೆ.
ಸರಕಾರ ತನ್ನ ಆದೇಶವನ್ನು ವಾಪಸ್ಸು ಪಡೆದ ಹಿನ್ನೆಲೆಯಲ್ಲಿ ಈ ಆದೇಶ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ಟ್ರಸ್ಟ್ ಗಳು ಕೂಡ ಅರ್ಜಿಯನ್ನು ಹಿಂಪಡೆದಿವೆ. ಕಳೆದ ಒಂದೂವರೆ ತಿಂಗಳಿಂದ ಬ್ಯಾಂಕ್ ವಹಿವಾಟು ನಡೆಯದೆ ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದ ಆಶ್ರಮ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.












Click it and Unblock the Notifications