ಮೊಬೈಲ್ ಜಾಲಕ್ಕೆ ಬಿದ್ದ 11 ಮಿಲಿಯನ್ ಗ್ರಾಹಕರು

ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್(COI) ಅಂಕಿ ಅಂಶಗಳ ಪ್ರಕಾರ ಇದರಿಂದ ದೇಶದ ಸೆಲ್ಯುಲಾರ್ ಗ್ರಾಹಕರ ಸಂಖ್ಯೆ 444 ಮಿಲಿಯನ್ ಗಳಿಗೇರಿದೆ. ದೇಶದ ಅತೀ ದೊಡ್ಡ ಮೊಬೈಲ್ ಸೇವಾ ಕಂಪೆನಿ ಭಾರ್ತಿ ಏರ್ ಟೆಲ್ ಮೇ ನಲ್ಲಿ 3 ಮಿಲಿಯನ್ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದ್ದು ಒಟ್ಟು ಗ್ರಾಹಕರ ಸಂಖ್ಯೆ 133.6 ಮಿಲಿಯನ್ ಗಳಿಗೇರಿದೆ.
ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಭಾರ್ತಿ ಪಾಲು ಶೇ.30 ಆಗಿದ್ದು ಇದರ ಪ್ರತಿಸ್ಪರ್ಧಿ ವೊಡಾಫೋನ್ ಎಸ್ಸಾರ್ ಮೇ ತಿಂಗಳಿನಲ್ಲಿ 2.59 ಗ್ರಾಹಕರನ್ನು ಸೆಳೆದಿದ್ದು ಇದರ ಒಟ್ಟು ಗ್ರಾಹಕರ ಸಂಖ್ಯೆ 106.3 ಮಿಲಿಯನ್ ಗಳಿಗೇರಿದೆ. ಕಳೆದ ಮೇ ತಿಂಗಳಿನಲ್ಲಿ ಐಡಿಯಾ ಸೆಲ್ಯುಲಾರ್ 1.4 ಮಿಲಿಯ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದ್ದು ಒಟ್ಟು ಗ್ರಾಹಕರ ಸಂಖ್ಯೆಯನ್ನು 66.72 ಮಿಲಿಯನ್ ಗಳಿಗೇರಿಸಿದೆ.
ಮಲೇಷ್ಯಾದ ಕಂಪೆನಿಯೊಂದು ಬಹುಪಾಲು ಹೊಂದಿರುವ ಏರ್ ಸೆಲ್ 1.6 ಮಿಲಿಯನ್ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದ್ದು ಒಟ್ಟು ಗ್ರಾಹಕರ ಸಂಖ್ಯೆ 40.07 ಮಿಲಿಯನ್ ಗಳಿಗೇರಿದೆ. ಸರ್ಕಾರೀ ಸ್ವಾಮ್ಯದ ಬಿ ಎಸ್ ಎನ್ ಎಲ್ 1.04 ಮಿಲಿಯನ್ ಹಾಗೂ ಎಮ್ ಟಿ ಎನ್ ಎಲ್ 40,297 ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿವೆ .
ಇದರಿಂದ ಬಿ ಎಸ್ ಎನ್ ಎಲ್ ನ ಒಟ್ಟು ಗ್ರಾಹಕರ ಸಂಖ್ಯೆ 65.79 ಮಿಲಿಯನ್ ಮತ್ತು ಎಮ್ ಟಿ ಎನ್ ಎಲ್ ನ ಗ್ರಾಹಕರ ಸಂಖ್ಯೆ 4.85 ಮಿಲಿಯನ್ ಗಳಿಗೇರಿದೆ . ಅಸೋಸಿಯೇಷನ್ ರಿಲಯನ್ಸ್ ಕಮ್ಯನಿಕೇಷನ್ಸ್ ನ ಅಂಕಿ ಅಂಶಗಳನ್ನು ನೀಡಿಲ್ಲ .
ಭಾರತ ಮೊಬೈಲ್ ಸೇವಾ ರಂಗದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ ಆಗಿದ್ದು 15 ಆಪರೇಟರ್ ಗಳಿದ್ದಾರೆ. ಪ್ರತೀ ತಿಂಗಳು 14-15 ಮಿಲಿಯನ್ ಜಿ ಎಸ್ ಎಮ್ ಮತ್ತು ಸಿ ಡಿ ಎಮ್ ಎ ಗ್ರಾಹಕರು ಸೇರ್ಪಡೆಗೊಳ್ಳುತ್ತಿದ್ದಾರೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications