ತ್ಯಾಜ್ಯದಿಂದ ಹೊರಹೊಮ್ಮಿದೆ 'ಕಸ್ತೂರಿ' ಪರಿಮಳ

ಮುಂಬೈನ ಪೂನಮ್ ಕಸ್ತೂರಿ ಕಸದಿಂದಲೇ ಉತ್ತಮ ಸಾವಯವ ಗೊಬ್ಬರ ತಯಾರಿಸಿ ಅದನ್ನು ಮಾರಾಟ ಮಾಡಿ ಯಶಸ್ವಿ ಉದ್ಯಮಿ ಆಗಿದ್ದಾರೆ. 2006ರಲ್ಲಿ ಸಾಮಾಜಿಕ ಕಳಕಳಿಯಿಂದಷ್ಟೇ ಪ್ರಾರಂಬಿಸಿದ ಅಡುಗೆಮನೆ ತ್ಯಾಜ್ಯವನ್ನು ಬಳಸಿ ಸಾವಯವ ಗೊಬ್ಬರ ತಯಾರಿಸುವ ಪೂನಮ್ ಕಸ್ತೂರಿ ಅವರ ಕಂಪನಿ ಡೈಲಿ ಡಂಪ್ ಇಂದು ವಾರ್ಷಿಕ 36 ಲಕ್ಷ ರೂಪಾಯಿಗಳಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ.
ಈ ಕಂಪನಿಗೆ ಇಂದು ಬೆಂಗಳೂರೊಂದರಲ್ಲೇ 4500 ಗ್ರಾಹಕರಿದ್ದಾರೆ. ಡೈಲಿ ಡಂಪ್ ನ ಮೊದಲ ವರ್ಷದ ವಹಿವಾಟು ಕೇವಲ 2 ಲಕ್ಷ ರೂಪಾಯಿಗಳಾಗಿತ್ತು. 2008ರಲ್ಲಿ ವಾರ್ಷಿಕ ವಹಿವಾಟು 12 ಲಕ್ಷ ರೂಪಾಯಿಗಳಿಗೇರಿತು. ನಗರಗಳಲ್ಲಿ ಇಂದಿಗೂ ಅಡುಗೆಮನೆ ತ್ಯಾಜ್ಯವನ್ನು ರಸ್ತೆಗಳಲ್ಲಿ ಸುರಿಯಲಾಗುತಿದ್ದು, ರಸ್ತೆಗಳ ಶೇ. 60ರಷ್ಟು ಕಸ ಅಡುಗೆಮನೆಯಿಂದಲೇ ಬರುತ್ತಿದೆ. ಇದನ್ನು ಪ್ರತಿಯೊಬ್ಬರೂ ಸಮರ್ಥವಾಗಿ ನಿರ್ವಹಣೆ ಮಾಡಿ ತಾವೇ ಸ್ವತಃ ಗೊಬ್ಬರ ತಯಾರಿಸಿಕೊಂಡರೆ ನಗರಗಳ ಸ್ವಚ್ಛತೆಯ ಜತೆಗೇ ನಗರದ ಅಂದವೂ ಹೆಚ್ಚುತ್ತದೆ ಎಂದು ಕಸ್ತೂರಿ ಹೇಳುತ್ತಾರೆ.
ಕಂಪನಿ ತಯಾರಿಸುವ ಸಾವಯವ ಗೊಬ್ಬರಕ್ಕೆ ದೆಹಲಿ,ಗೋವಾ, ಕೋಲ್ಕತಾ, ಹೈದರಾಬಾದ್ ನಲ್ಲೂ ಗ್ರಾಹಕರಿದ್ದಾರೆ. ಕಸ್ತೂರಿ ತಯಾರಿಸುವ ವಿವಿಧ ಶ್ರೇಣಿಯ ಸಾವಯವ ಗೊಬ್ಬರಗಳು ಪ್ರತೀ ಮನೆಗೆ ಸರಿ ಹೊಂದುತ್ತವೆ. ಸಾವಯವ ಗೊಬ್ಬರವನ್ನು ಬಳಸಲು ಮೊದಲಿಗೆ ಜನ ವಾಸನೆ, ಇರುವೆ, ಹುಳು ಕಾಟ ಎಂದು ಹಿಂಜರಿದರಾದರೂ, ಅದರಿಂದ ಆಗುವ ಲಾಭವನ್ನು ಮನಗಂಡು ಬಳಸಲು ಮುಂದೆ ಬರುತ್ತಿದ್ದಾರೆ ಎಂದ ಕಸ್ತೂರಿ ಅವರು ಮನೆಗಳಲ್ಲೇ ತಯಾರಿಸಿದ ಉತ್ತಮ ಗುಣಮಟ್ಟದ ಸಾವಯವ ಗೊಬ್ಬರವನ್ನು ಖರೀದಿಸಲೂ ಕಂಪನಿ ಸಿದ್ದ ಎಂದರು.
ಇದೇ ರೀತಿಯ ಘಟಕವನ್ನು ಸ್ಥಾಪಿಸಲು ದೇಶದ ಯಾವುದೇ ಭಾಗದಿಂದ ಯಾರೇ ಮುಂದೆ ಬಂದರೂ ಅವರಿಗೆ ಎಲ್ಲಾ ರೀತಿಯ ತಂತ್ರಜ್ಞಾನ ಸಹಕಾರ ನೀಡುವದಾಗಿ ಹೇಳುವ ಕಸ್ತೂರಿ ಅವರು ಚಿಲ್ಲರೆ ಅಂಗಡಿಗಳಲ್ಲಿ ಸಾವಯವ ಗೊಬ್ಬರ ಮಾರಾಟ ಮಾಡಿದರೆ ಮಾರುಕಟ್ಟೆಗೆ ಅನುಕೂಲವಾಗುತ್ತದೆ ಎಂದರು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications