ಫ್ರಾನ್ಸ್ ನಲ್ಲಿರುವ ವೀರ್ ಸ್ಮಾರಕ ಭಾರತದಲ್ಲೇಕಿಲ್ಲ?

ಇಂಥ ಸಂದರ್ಭದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರಿಗಿಂತ ಮೊದಲೇ ಸ್ವದೇಶಕ್ಕೆ ಮರಳಿದ ಫ್ರಾನ್ಸ್ ಸರಕಾರ ನಿರ್ಲಕ್ಷಿತ ನಾಯಕ ವೀರ ಸಾವರಕರ್ ಅವರಿಗೆ ಗೌರವ ನೀಡಲು ನಿರ್ಧರಿಸಿದೆ. ಸಾರವಕರ್ ಅವರ ಗೌರವಾರ್ಥವಾಗಿ ತಮ್ಮ ದೇಶದಲ್ಲಿ ಸ್ಮಾರಕ ನಿರ್ಮಿಸಲು ಫ್ರೆಂಚ್ ಸರಕಾರ ಒಪ್ಪಿಗೆ ನೀಡಿದೆ. ಆದರೆ ನಮ್ಮ ಭಾರತ ಸರಕಾರ ವಿನಾಕಾರಣ ಸ್ಮಾರಕ ನಿರ್ಮಾಣವನ್ನು ಮುಂದೂಡುತ್ತಲೇ ಬಂದಿದೆ.
ಭಾರತದ ಸ್ವಾತಂತ್ರ್ಯಕ್ಕಾಗಿ ಬರವಣಿಗೆಯ ಮೂಲಕ ಹೋರಾಟ ನಡೆಸಿದ್ದ ವೀರ ಸಾವರಕರ್ ಅವರು ಬ್ರಿಟಿಷರ ಬಂಧನದಿಂದ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರಿದ್ದು ಜುಲೈ 8ರಂದು. ಇದೇ ವರ್ಷ ಈ ಐತಿಹಾಸಿಕ ಕ್ಷಣಕ್ಕೆ ಶತಮಾನೋತ್ಸವ. ಈ ಸಂದರ್ಭದಲ್ಲಿ ಫ್ರಾನ್ಸ್ ನಲ್ಲಿ ವೀರ ಸಾವರಕರ್ ಸ್ಮಾರಕ ನಿರ್ಮಾಣವಾಗಲಿದೆ. ಫ್ರಾನ್ಸ್ ನಲ್ಲಿ ಸ್ಮಾರಕ ನಿರ್ಮಾಣವಾಗಬೇಕಾದರೆ ಭಾರತದಲ್ಲೇಕಿಲ್ಲ? ಈ ಐತಿಹಾಸಿಕ ಘಟನೆಯನ್ನು ಆಚರಿಸಲು ಸರಕಾರ ಏನು ಸಿದ್ಧತೆ ಮಾಡಿಕೊಳ್ಳುತ್ತಿದೆ?
ಮೇ 28ರಂದು ಸ್ವಾತಂತ್ರ್ಯ ಹೋರಾಟಗಾರ, ಕಟ್ಟಾ ಹಿಂದೂತ್ವವಾದಿ, ಕವಿ, ಸಾಹಿತಿ, ಸಂಸ್ಕೃತ ಪಂಡಿತ ವೀರ ಸಾವರಕರ್ ಅವರ ಜನ್ಮದಿನವನ್ನು ಯಾವುದೇ ಸದ್ದುಗದ್ದಲವಿಲ್ಲದೆ ಆಚರಿಸಲಾಯಿತು. ಕೇಂದ್ರದ ಗದ್ದುಗೆಯಲ್ಲಿ ಕುಳಿತಿರುವ ಯುಪಿಎ ಸರಕಾರ ಸುದ್ದಿಯನ್ನೂ ಮಾಡಲಿಲ್ಲ.
ಕಾಂಗ್ರೆಸ್ ನೀತಿಯನ್ನು ಜಿದ್ದಾಜಿದ್ದಿ ವಿರೋಧಿಸುತ್ತಿದ್ದ ವೀರ ಸಾವರಕರ್ ಅವರಿಗೆ ಕನಿಷ್ಠ ಗೌರವನ್ನೂ ನೀಡಲು ಕಾಂಗ್ರೆಸ್ ಯತ್ನಿಸಿಲ್ಲ. ಸ್ಮಾರಕ ನಿರ್ಮಾಣ ಮಾಡುವುದು ಹೋಗಲಿ ಸಂಸತ್ತಿನಲ್ಲಿ ತೂಗು ಹಾಕಿದ್ದ ಭಾವಚಿತ್ರವನ್ನು ಕಿತ್ತುಹಾಕಬೇಕೆಂದು ಕಾಂಗ್ರೆಸ್ ನಿರ್ಧರಿಸಿತ್ತು. ಕಾಲಾಪಾನಿ ಶಿಕ್ಷೆ ಅನುಭವಿಸಿದ ಅಂಡಮಾನ್ ಸೆಲ್ಯುಲಾರ್ ಜೈಲಿನಲ್ಲಿ ಸಾವರಕರ್ ಅವರು ಬರೆದಿದ್ದ ಘೋಷವಾಕ್ಯಗಳನ್ನು ಅಳಿಸಬೇಕೆಂದು ಕಾಂಗ್ರೆಸ್ ಹುಯಿಲೆಬ್ಬಿಸಿತ್ತು. ಇಂಥ ಸರಕಾರದಿಂದ ವೀರ ಸಾವರಕರ್ ಅವರ ಕುರಿತು ಏನನ್ನು ನಿರೀಕ್ಷಿಸಲು ಸಾಧ್ಯ?
ರಾಜಕೀಯ ಪಕ್ಷಗಳು ಹೋಗಲಿ, ಸ್ವಾತಂತ್ರ್ಯ ಯೋಧರನ್ನು ಪ್ರೀತಿಸುವ ಮತ್ತು ಗೌರವಿಸುವ ಜನಸಾಮಾನ್ಯರಿಗಾದರೂ ಏನಾಗಿದೆ? ಇಂಥ ಅಪ್ರತಿಮ ಹೋರಾಟಗಾರರ ಸ್ಮಾರಕ ನಿರ್ಮಾಣಕ್ಕೆ ದನಿ ಎತ್ತಿದರೆ ತಾನೆ ಅವರ ಹೋರಾಟಕ್ಕೂ ಗೌರವ ಸಲ್ಲಿಸಿದಂತೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications