ಅಕ್ರಮ ಶಸ್ತ್ರಾಸ್ತ್ರ ಮಾರಾಟ ಇಬ್ಬರ ಸೆರೆ

ಬಂಧಿತರು ಆಂಧ್ರದ ಗಂಗಾವರಂನ ಧರ್ಮೇಂದ್ರ ಹಾಗೂ ಜಾರ್ಖಂಡ್ ರಾಜ್ಯದ ಶಕೀಲ್ ಅನ್ಸಾರಿ. ಬಂಧಿತರಿಂದ ಮೇಡ್ ಇನ್ ಯುಎಸ್ಎ ಎಂದು ನಮೂಸಿದ 2 ಕಂಟ್ರಿ ಮೇಡ್ ಪಿಸ್ತೂಲ್, ಎರಡು ಸ್ಪೇರ್ ಮ್ಯಾಗಜಿನ್, 30 ಗುಂಡುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
4 ಲಕ್ಷ ರು.ಮೌಲ್ಯದ ಈ ವಸ್ತುಗಳನ್ನು ಬಂಧಿತರು ಮಾರಾಟ ಮಾಡಲು ಬಳ್ಳಾರಿಗೆ ಆಗಮಿಸಿದ್ದರು ಎಂದು ಪೊಲೀಸರು ತಿಳಿಸಿದರು. ಮೋಕಾ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಅವರು ಮಾಹಿತಿ ನೀಡಿದರು.
*****
ಚಾಲಾಕಿ ಲಾರಿ ಕಳ್ಳರು
ಲಾರಿಗಳಿಗೆ ನಕಲಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿ ಸರಕು ಸಾಗಿಸುವ ನೆಪದಲ್ಲಿ ವಿವಿಧ ಕಂಪನಿಗಳಿಗೆ ವಂಚಿಸುತ್ತಿದ್ದ ಆಂಧ್ರದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ 10 ಲಕ್ಷ ರು. ಮೌಲ್ಯದ ನಗದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆಂಧ್ರದ ಶ್ರೀನಿವಾಸಪುರಂನ ತಾಡಪತ್ರಿಯ ನರೇಶ (29), ಅನಂತಪುರದ ನಾಗರಾಜ (29) ಮತ್ತು ಕೆ.ಎನ್. ಪಾಳ್ಯಂನ ಜಿ. ಸೂರಿ ( 38) ಅಲಿಯಾಸ್ ಸೂರಪ್ಪ ಬಂಧಿತ ಆರೋಪಿಗಳು.ಆರೋಪಿಗಳಿಂದ ಒಂದು ಲಾರಿ, 4,99,900 ರು. ನಗದು, ನಕಲಿ ನಂಬರ್ ಪ್ಲೇಟ್ಸ್, ಸ್ಟಿಕ್ಕರ್ಗಳು, ಲಾರಿಗೆ ಸಂಬಂಧಿಸಿದ ನಕಲಿ ದಾಖಲಾತಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಆರೋಪಿಗಳು ಕಳೆದ ಅಕ್ಟೋಬರ್ 21,2009 ರಂದು ಸ್ಟೀಮ್ ಲೈನ್ ಇಂಡಸ್ಟ್ರೀಸ್ ಟ್ರಾನ್ಸ್ ಪೋರ್ಟ್ ಕಂಪನಿಯ ಮುಖಾಂತರ 9.39 ಲಕ್ಷ ರೂ. ಮೌಲ್ಯದ 23.450 ಮೆಟ್ರಿಕ್ ಟನ್ ತೂಕದ ಸಿ.ಆರ್. ಸ್ಟೀಲ್ ಪ್ಲೇಟ್ ಅನ್ನು ಜೆಎಸ್ಡಬ್ಲ್ಯೂನಲ್ಲಿ ಲೋಡ್ ಮಾಡಿಕೊಂಡು ಮಹಾರಾಷ್ಟ್ರದ ಭಾರಮತಿಗೆ ಸಾಗಿಸುತ್ತಿದ್ದರು.
ಆರೋಪಿಗಳು ನಿಗದಿತ ಸ್ಥಳಕ್ಕೆ ಈ ಮಾಲನ್ನು ತಲುಪಿಸದೇ ಮೋಸ ಮಾಡಿದ್ದಾರೆ ಎಂದು ಕಂಪನಿಯ ವ್ಯವಸ್ಥಾಪಕ ಪ್ರಮೋದ್ ಶರ್ಮ ಗಾದಿಗನೂರು ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಲಾಗುತ್ತಿದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications