ರಾಜಗೋಪುರ ಪತನ, ಇದು ಅಪಶಕುನವೇ ?
ಕಾಳಹಸ್ತಿ, ಮೇ .27 : ದೇಶದ ಪ್ರಸಿದ್ದ ಐತಿಹಾಸಿಕ ದೇವಾಲಯಗಳಲ್ಲಿ ಒಂದಾದ ಶ್ರೀಕಾಳಹಸ್ತಿ ಶಿವದೇವಾಲಯದ ರಾಜಗೋಪುರ ಬುಧವಾರ (ಮೇ 26 ) ರಾತ್ರಿ 8.30ರ ಸುಮಾರಿಗೆ ಕುಸಿದು ಬಿದ್ದಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಭಕ್ತಾದಿಗಳಲ್ಲಿ ಆತಂಕ ಮನೆಮಾಡಿದೆ. ಅಪಶಕುನದ ಸೂಚಕವೋ ಎಂಬಂತೆ ಚಿತ್ತೂರಿನ ಮಳಕಲಚರವು ಎಂಬಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಹುಬ್ಬಳ್ಳಿ ಮೂಲದ ಐವರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಕ್ರಿ.ಶ 1516 ರಲ್ಲಿ ಗಜಪತಿ ಸಾಮ್ರಾಜ್ಯದ ಮೇಲೆ ವಿಜಯ ಸಾಧಿಸಿದ ಕುರುಹಾಗಿ ಈ ರಾಜಗೋಪುರವನ್ನು ಶ್ರೀ ಕೃಷ್ಣ ದೇವರಾಯ ನಿರ್ಮಿಸಿದ್ದನು.7 ಅಂತಸ್ತಿನ ಸುಮಾರು 136 ಅಡಿ ಎತ್ತರದ ರಾಜ ಗೋಪುರ ದೇಗುಲದ ಆಕರ್ಷಣೆಯ ಭಾಗವಾಗಿತ್ತು. ಕಾಂಕ್ರೀಟ್ ನಿಂದ ನಿರ್ಮಿಸಿರುವ ಮೊದಲ ಅಂತಸ್ತು ಸುರಕ್ಷಿತವಾಗಿದ್ದು, ಅದರ ಮೇಲಿನ ಆರು ಅಂತಸು ಕುಸಿದು ಬಿದ್ದಿದೆ. ಗೋಪುರ ಕುಸಿತಕ್ಕೂ ಎರಡು ದಿನ ಮುನ್ನ ಚೆನ್ನೈನಿಂದ ಬಂದಿದ್ದ ತಂತ್ರಜ್ಞರು, ಆಂಧ್ರದ ಭೂ ವಿಜ್ಞಾನಿಗಳು ಗೋಪುರದ ದುರಸ್ತಿ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದ್ದರು.
ಕುಸಿತಕ್ಕೆ ಕಾರಣವೇನು: 80 ರ ದಶಕದಲ್ಲೇ ಗೋಪುರದಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡರೂ ದುರಸ್ತಿ ಕಾರ್ಯ ವಿಳಂಬವಾಗಿತ್ತು. ಟಿಟಿಡಿ ಕೂಡ ತನ್ನ ಸಹಾಯ ಹಸ್ತ ಚಾಚಿ ದುರಸ್ತಿ ಕಾರ್ಯಕ್ಕೆ ನೆರವಾಗಿತ್ತು. ಆದರೆ, ದಿನೇ ದಿನೇ ಬಿರುಕು ದೊಡ್ಡದಾಗತೊಡಗಿತು. ಇತ್ತೀಚಿನ ಲೈಲಾ ಚಂಡಮಾರುತದ ಹೊಡೆತವೂ ಕಾರಣ ಎನ್ನಬಹುದು. ದೇಗುಲದ ಸಮೀಪದಲ್ಲೇ ಇತ್ತೀಚೆಗೆ ಬೋರ್ ವೇಲ್ ನಿರ್ಮಿಸಲು ಸುಮಾರು 500-600 ಅಡಿ ಆಳ ಕೊರೆದದ್ದು ಗೋಪುರ ಕುಸಿತಕ್ಕೆ ಇನ್ನೊಂದು ಕಾರಣ ಎನ್ನಬಹುದು ಎಂದು ಭೂ ವಿಜ್ಞಾನಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಕಾಳಹಸ್ತಿ ನಗರ ಸ್ವರ್ಣಮುಖಿ ನದಿ ದಡದಲ್ಲಿದ್ದು, ಅಕ್ರಮ ಮರಳು ಸಾಗಾಣಿಕೆ ಕೂಡ ಇಲ್ಲಿ ಅವ್ಯಾಹತವಾಗಿ ಸಾಗಿದೆ. ಆದರೆ, ದುರಸ್ತಿ ಕಾರ್ಯದಲ್ಲಿ ಯಾವುದೇ ಉದಾಸೀನತೆ ತೋರಿಲ್ಲ. ಟಿಟಿಡಿ ಹಾಗೂ ಸರ್ಕಾರ ಎಲ್ಲವಿಧದಲ್ಲೂ ಗೋಪುರ ದುರಸ್ತಿಗೆ ಶ್ರಮಿಸಿತ್ತು ಎಂದು ಆಂಧ್ರದ ಧಾರ್ಮಿಕ ದತ್ತಿ ಖಾತೆ ಸಚಿವ ಜಿ.ವೆಂಕಟ ರೆಡ್ಡಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಕುಸಿತಕ್ಕೆ ಸಾಕ್ಷಿಯಾದ ಕೃಷ್ಣದೇವರಾಯ:20 ನಿಮಿಷಗಳಲ್ಲಿ ಇಡೀ ಗೋಪುರ ಕುಸಿತ ಕಂಡರೂ ಪವಾಡ ಎಂಬಂತೆ ಗೋಪುರದ ಎದುರಿಗಿರುವ ಶ್ರೀಕೃಷ್ಣದೇವರಾಯನ ಪ್ರತಿಮೆಗೆ ಏನು ಕುಂದುಂಟಾಗಿಲ್ಲ. ವಾರ್ಷಿಕವಾಗಿ ಸುಮಾರು 100 ಕೋಟಿ ರು ಆದಾಯವಿರುವ ಈ ದೇಗುಲ ತಿರುಪತಿಗೆ ಸಮೀಪವಿರುವ ಕಾರಣ, ಭಕ್ತಾದಿಗಳು ಅಧಿಕ ಸಂಖ್ಯೆ ಯಲ್ಲಿ ಭೇಟಿ ನೀಡುತ್ತಿದ್ದರು.
ವಿಶೇಷವಾಗಿ ಕುಜರಾಹು ಕೇತು ದೋಷ ಪರಿಹಾರಕ್ಕಾಗಿ ಈ ದೇವಾಲಯ ಪ್ರಸಿದ್ಧವಾದ್ದರಿಂದ ಕರ್ನಾಟಕ ಸೇರಿದಂತೆ ಹಲವೆಡೆಗಳಿಂದ ಭಕ್ತಾದಿಗಳು ಭೇಟಿ ನೀಡುತ್ತಾರೆ. ಬೇಡರ ಕಣ್ಣಪ್ಪ ಪೂಜಿಸಿದ ಶಿವ ಲಿಂಗವೂ ಇಲ್ಲಿನದೇ ಎಂಬ ಐತಿಹ್ಯ ಕೂಡ ಇದೆ.
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications