ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ : 18 ಗಣಿಗಳ ಪರವಾನಗಿ ರದ್ದು

By Mrutyunjaya Kalmat
|
Google Oneindia Kannada News

Bellary map
ಬಳ್ಳಾರಿ, ಮೇ. 21 : ಗಣಿಗಾರಿಕೆ ನಿಯಮ ಉಲ್ಲಂಘಿಸಿದ ಜಿಲ್ಲೆಯ 19 ಗಣಿಗಳ ಚಟುವಟಿಕೆಗಳನ್ನು ಅಮಾನತುಗೊಳಿಸಿ ಭಾರತೀಯ ಗಣಿ ಪ್ರಾಧಿಕಾರದ ನಿಯಂತ್ರಣಾಧಿಕಾರಿ ಮೇ 11 ರಂದು ಹೊರಡಿಸಿದ್ದು, ಸಂಬಂಧಿಸಿದ ಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

ನಿಯಮಗಳ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಏಪ್ರಿಲ್ ನಲ್ಲಿ ಜಿಲ್ಲೆಗೆ ಆಗಮಿಸಿದ್ದ ಐಬಿಎಂ ಅಧಿಕಾರಿಗಳ ವಿಶೇಷ ಕಾರ್ಯಪಡೆ ತಂಡ ಬಳ್ಳಾರಿ ತಾಲ್ಲೂಕಿನ 10, ಹೊಸಪೇಟೆ ಮತ್ತು ಸಂಡೂರು ತಾಲ್ಲೂಕಿನ ಬಹುತೇಕ ಗಣಿ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಾಗಿತ್ತು. ಪರವಾನಗಿ ನವೀಕರಿಸದೇ ಗಣಿಗಾರಿಕೆ ಮುಂದುವರಿಕೆ, ಯೋಜಿತ ನಕ್ಷೆ ಪರಿಗಣಿಸದೆ ಗಣಿಗಾರಿಕೆ, ಕಳಪೆ ಗುಣಮಟ್ಟದ ಅದಿರು ಗಣಿಗಾರಿಕೆ, ಗಣಿಗಾರಿಕೆ ಪ್ರದೇಶದ ವ್ಯಾಪ್ತಿ ಉಲ್ಲಂಘನೆ ಮತ್ತಿತರ ನಿಯಮ ಉಲ್ಲಂಘನೆಯ ಆರೋಪಗಳು ಇವುಗಳ ಮೇಲಿದ್ದವು.

ಬಳ್ಳಾರಿ ಮತ್ತು ಹೊಸಪೇಟೆ ತಾಲ್ಲೂಕಿನಲ್ಲಿ 3, ಸಂಡೂರು ತಾಲ್ಲೂಕಿನ 13 ಕಂಪನಿಗಳ ಚಟುವಟಿಕೆಗಳನ್ನು ಅಮಾನತುಗೊಳಿಸಿ ಐಬಿಎಂನ ಅಧಿಕಾರಿ ಪ್ರಾದೇಶಿಕ ಅಧಿಕಾರಿ ಐವಾನ್ ಖೇಸ್ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X