ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಳ್ಳಾರಿ : 18 ಗಣಿಗಳ ಪರವಾನಗಿ ರದ್ದು
ನಿಯಮಗಳ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಏಪ್ರಿಲ್ ನಲ್ಲಿ ಜಿಲ್ಲೆಗೆ ಆಗಮಿಸಿದ್ದ ಐಬಿಎಂ ಅಧಿಕಾರಿಗಳ ವಿಶೇಷ ಕಾರ್ಯಪಡೆ ತಂಡ ಬಳ್ಳಾರಿ ತಾಲ್ಲೂಕಿನ 10, ಹೊಸಪೇಟೆ ಮತ್ತು ಸಂಡೂರು ತಾಲ್ಲೂಕಿನ ಬಹುತೇಕ ಗಣಿ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಾಗಿತ್ತು. ಪರವಾನಗಿ ನವೀಕರಿಸದೇ ಗಣಿಗಾರಿಕೆ ಮುಂದುವರಿಕೆ, ಯೋಜಿತ ನಕ್ಷೆ ಪರಿಗಣಿಸದೆ ಗಣಿಗಾರಿಕೆ, ಕಳಪೆ ಗುಣಮಟ್ಟದ ಅದಿರು ಗಣಿಗಾರಿಕೆ, ಗಣಿಗಾರಿಕೆ ಪ್ರದೇಶದ ವ್ಯಾಪ್ತಿ ಉಲ್ಲಂಘನೆ ಮತ್ತಿತರ ನಿಯಮ ಉಲ್ಲಂಘನೆಯ ಆರೋಪಗಳು ಇವುಗಳ ಮೇಲಿದ್ದವು.
ಬಳ್ಳಾರಿ ಮತ್ತು ಹೊಸಪೇಟೆ ತಾಲ್ಲೂಕಿನಲ್ಲಿ 3, ಸಂಡೂರು ತಾಲ್ಲೂಕಿನ 13 ಕಂಪನಿಗಳ ಚಟುವಟಿಕೆಗಳನ್ನು ಅಮಾನತುಗೊಳಿಸಿ ಐಬಿಎಂನ ಅಧಿಕಾರಿ ಪ್ರಾದೇಶಿಕ ಅಧಿಕಾರಿ ಐವಾನ್ ಖೇಸ್ ಆದೇಶ ಹೊರಡಿಸಿದ್ದಾರೆ.
Comments
Story first published: Friday, May 21, 2010, 11:38 [IST]