ಕೋಡಂಗಿ ಗಿರಿಜನರಿಗೆ 'ಮರವೇ' ಮನೆ

ಇವರು ವರ್ಷದ ಹೆಚ್ಚಿನ ದಿನಗಳನ್ನು ಮರದಲ್ಲಿ ಮಲಗಿ ಕಳೆಯುತ್ತಾರೆ. ಹಾಗೆಂದು ಮರದಲ್ಲಿ ಮಲಗುವುದು ಇವರ ಸಂಪ್ರದಾಯವಲ್ಲ. ಇದು ನಮ್ಮ ತುಕ್ಕು ಹಿಡಿದ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾರದು. ಕೋಡಂಗಿ ಹಾಡಿಯ ಗಿರಿಜನರಿಗೆ ಸದಾ ಕಾಡಾನೆ ದಾಳಿಯ ಭಯ. ರಾತ್ರಿ ವೇಳೆಯಲ್ಲಿ ದಾಳಿಯಿಡುವ ಕಾಡಾನೆಗಳು ತಾವು ವಾಸಿಸುವ ಗುಡಿಸಲುಗಳನ್ನು ನಾಶ ಮಾಡುತ್ತವೆ. ಮತ್ತೆ ಮಾರನೆಯ ದಿನ ಗುಡಿಸಲು ನಿರ್ಮಿಸಿಕೊಳ್ಳುವುದು ಇವರಿಗೆ ಮಾಮೂಲಿಯಾಗಿದೆ. ಗುಡಿಸಲು ನಾಶವಾದರೆ ಮತ್ತೆ ನಿರ್ಮಿಸಿಕೊಳ್ಳಬಹುದು ಆದರೆ ದಾಳಿ ಮಾಡಿ ಪ್ರಾಣ ತೆಗೆದರೆ ಮತ್ತೆ ತರಲು ಸಾಧ್ಯನಾ? ಎಂದು ಪ್ರಶ್ನಿಸುವ ಇಲ್ಲಿನ ಮಂದಿ ಪ್ರಾಣ ರಕ್ಷಣೆಗೋಸ್ಕರ ರಾತ್ರಿ ಮರವೇರಿ ಮಲಗುತ್ತೇವೆ ಎಂಬ ಅಸಹಾಯಕ ನುಡಿಯಾಡುತ್ತಾರೆ.
ಕೋಡಂಗಿ ಹಾಡಿಯ ಗಿರಿಜನರದ್ದು ಇದು ಇಂದು ನಿನ್ನೆಯ ಗೋಳಲ್ಲ. ಬಹಳ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಹಾಡಿಗೆ ಸರ್ಕಾರದ ಯಾವುದೇ ಮೂಲಭೂತ ಸೌಕರ್ಯ ತಲುಪಿಲ್ಲ. ಹಾಗಾಗಿ ಒಂದು ಕೊಡ ನೀರು ಬೇಕಾದರೂ ಕಿಲೋಮೀಟರ್ಗಟ್ಟಲೆ ನಡೆಯಬೇಕು. ತಲತಲಾಂತರದಿಂದ ನೆಲೆಸಿರುವ ಈ ಹಾಡಿಯನ್ನು ಬಿಟ್ಟು ಬೇರೆ ಕಡೆ ನೆಲೆಸಲು ಇಲ್ಲಿಯ ಮಂದಿ ತಯಾರಿಲ್ಲ. ಇಲ್ಲಿಗೆ ಸೌಲಭ್ಯ ಒದಗಿಸಲು ನಮ್ಮ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ ಹೀಗಾಗಿ ಈ ಹಾಡಿಯ ಗಿರಿಜನರ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ.
ನಾಗರಹೊಳೆ ಅರಣ್ಯದಲ್ಲಿ ಆಹಾರ ಸಮಸ್ಯೆ ಇರುವುದರಿಂದ ಕಾಡಾನೆಗಳು ಆಹಾರ ಅರಸುತ್ತಾ ನಾಡಿನತ್ತ ಬರತೊಡಗಿದ್ದು, ಹೀಗೆ ಬರುವ ಕಾಡಾನೆಗಳು ಕೋಡಂಗಿ ಹಾಡಿಯತ್ತ ನುಗ್ಗಿ ದಾಳಿ ಮಾಡುತ್ತವೆ. ಸಾಮಾನ್ಯವಾಗಿ ರಾತ್ರಿ ಹೊತ್ತಲ್ಲೇ ದಾಳಿ ಮಾಡುವುದರಿಂದ ಸಂಜೆಯೇ ರಾತ್ರಿಯ ಊಟ ಮುಗಿಸಿಕೊಂಡು ವೃದ್ಧರು, ಮಕ್ಕಳು ಪಕ್ಕದ ಹಾಡಿಗೆ ಹೋದರೆ, ಉಳಿದವರು ಮರಹತ್ತಿ ಮಲಗುತ್ತಾರೆ. ಇವರ ಗೋಳು ನೋಡಿದರೆ ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಕವನ ನೆನಪಾಗುತ್ತದೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications