ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಂಸಿಐ ತಜ್ಞರ ಸಮಿತಿಯಲ್ಲಿ ಡಾ ದೇವಿಶೆಟ್ಟಿ
ಎಂಸಿಐ ಅಧ್ಯಕ್ಷರಾಗಿದ್ದ ಡಾ ಕೇತನ್ ದೇಸಾಯಿ ಇತ್ತೀಚೆಗೆ ಲಂಚ ಪ್ರಕರಣದಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ 76 ವರ್ಷಗಳ ಹಿಂದೆ ರಚಿಸಲಾಗಿದ್ದ ಮಂಡಳಿಯ ವಿಸರ್ಜನೆಯ ಸುಗ್ರಿವಾಜ್ಞೆಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸಹಿ ಹಾಕಿದರು. ಈ ಸಂಬಂಧ ಕಾನೂನು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಡಾ ಎಸ್ಕೆ ಶರೀನ್ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯಲ್ಲಿ ಡಾ ರಂಜಿತ್ ರಾಯ್ ಚೌಧರಿ, ಸೀತಾ ನಾಯಕ್, ಗೌತಮ್ ಸೇನ್, ಡಾ ದೇವಿ ಶೆಟ್ಟಿ ಹಾಗೂ ಆರ್ ಎಲ್ ಸಾಲ್ಡಾನಾ ಇದ್ದಾರೆ.
ಈ ವೈದ್ಯರ ಸಮಿತಿ ಮುಂದಿನ ಒಂದು ವರ್ಷದವರೆಗೆ ಕಾರ್ಯನಿರ್ವಹಿಸಲಿದೆ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಸುಜಾತಾ ರಾವ್ ತಿಳಿಸಿದ್ದಾರೆ. ದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ನಿಯಂತ್ರಿಸಲು ಮೇಲುಸ್ತುವಾರಿ ಮಂಡಳಿಯ ರಚನೆಗೆ ಹೊಸ ಕಾನೂನು ತರಲಾಗುವುದು ಎಂದು ಸರಕಾರ ತಿಳಿಸಿದೆ.
Comments
Story first published: Sunday, May 16, 2010, 12:53 [IST]