ನಾನು ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ : ಮುತಾಲಿಕ್

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಲ ಹಿಂದೂಯೇತರ ಸಂಘಟನೆಗಳು ಹಿಂದು ಸಂಘಟನೆಗಳನ್ನು ಹಣಿಯಲು ಸಂಚು ರೂಪಿಸಿವೆ. ರೊಕ್ಕಗಾಗಿ ಶ್ರೀರಾಮಸೇನೆ ಎಂದೂ ಇಂತಹ ನೀಚ ಕೆಲಸಕ್ಕೆ ಇಳಿದಿಲ್ಲ. ನಾನು ನಿರಪರಾಧಿ. ತೆಹಲ್ಕಾ, ಆಜ್ ತಕ್, ಹೆಡ್ ಲೈನ್ಸ್ ಟುಡೇ ಪತ್ರಿಕೆಗಳ ಮೇಲೆ ದೂರು ಸಲ್ಲಿಸುವೆ ಎಂದು ಅವರು ಹೇಳಿದ್ದಾರೆ.
ದೇಶಕ್ಕಾಗಿ, ಹಿಂದೂತ್ವಕ್ಕಾಗಿ ನಿಸ್ವಾರ್ಥದಿಂದ ಸೇವೆ ಸಲ್ಲಿಸಿದ್ದೇನೆ. ನನ್ನ ಹಾಗೂ ಶ್ರೀರಾಮಸೇನೆಯ ಹೆಸರು ಕೆಡಿಸಲು ಸಂಚು ರೂಪಿಸಲಾಗಿದೆ. ನಾನು ತಪ್ಪು ಮಾಡಿದ್ದರೆ ಬಹಿರಂಗವಾಗಿ ಗಲ್ಲಿಗೇರಿಸಲಿ. ನಾನು ಯಾರ ಬಳಿಯೂ ಹಣ ಪಡೆದಿಲ್ಲ ಎಂದು ಮುತಾಲಿಕ್ ಸ್ಪಷ್ಟಪಡಿಸಿದ್ದಾರೆ. ಬೆಳಗಾವಿ ಪೊಲೀಸ್ ಠಾಣೆಯಲ್ಲಿ ಮುತಾಲಿಕ್ ಪತ್ರಿಕೆ ಮತ್ತು ವಾಹಿನಿ ವಿರುದ್ಧ ದೂರು ದಾಖಲಿಸಿದ್ದಾರೆ.












Click it and Unblock the Notifications