ವಿದ್ಯಾರ್ಥಿ ಭವನ್ ಹಾಲ್ ಆಫ್ ಫೇಮ್ಗೆ ಯಡ್ಡಿ

ಅಲ್ಲಿಗೆ ಯಾವಾಗ ಹೋದರೂ ರಶ್ಶು. ನಿನ್ನೆ ಇನ್ನೂ ಸಖತ್ ರಶ್ಶಿತ್ತು. ಯಾರೋ ವಿಐಪಿ ಬಂದಿದ್ದರು ಕಾಣತ್ತೆ, ಹೋಟೆಲ್ ಬಿಡಿ, ಮೇನ್ ರೋಡಿನಲ್ಲೇ ಕಾಲಿಡಕ್ಕೆ ಜಾಗ ಇರಲಿಲ್ಲ, ದೋಸೆ ತಿನ್ನದೆ ಹಾಗೇ ವಾಪಸ್ಸು ಬಂದ್ವಿ ಎಂದು ಜರಗನಹಳ್ಳಿಯ ರಂಗಸ್ವಾಮಿ ಫೋನಿನಲ್ಲಿ ಬೇಜಾರು ಮಾಡಿಕೊಳ್ಳುತ್ತಿದ್ದರು.
ಆ ಹೋಟೆಲಿಗೆ ಗಣ್ಯರೇ ಹೋಗುತ್ತಾರೆ ಅಥವಾ ಹೋದವರೆಲ್ಲ ಗಣ್ಯರೇ ಆಗುತ್ತಾರೆ ಬಿಡ್ರೀ ಅದರಲ್ಲೇನಿದೆ ರಂಗಸ್ವಾಮಿಗಳೇ ಎಂದು ಹೇಳಿ ಅವರನ್ನು ಸಮಾಧಾನಿಸಿದೆ. ನಾನು ಮಾತ್ರ ನನ್ನ ಪಾಡಿಗೆ ಅನ್ನ ಜೀರಿಗೆ ಸಾರು ತಿಂದುಕೊಂಡು ಮನೆಯಲ್ಲಿ ಹಾಯಾಗಿದ್ದೆ.
ಇವತ್ತು ಬೆಳಗ್ಗೆ ಎದ್ದು ವಿಜಯ ಕರ್ನಾಟಕ ತಿರುವುಹಾಕಿದಾಗ ಸುದ್ದಿ ಖಚಿತವಾಯಿತು. ನಾಲಕ್ಕನೇ ಪುಟದಲ್ಲಿ ಬಿಎಸ್ ವೈ ಖಾರಾ ಬಾತ್ ತಿನ್ನುವುದನ್ನು ನಿಲ್ಲಿಸಿ ಛಾಯಾಗ್ರಾಹಕರಿಗೆ ಫೋಸು ಕೊಡುತ್ತಿರುವ ದೃಶ್ಯ ಕಣ್ಣಗೆ ಬಿತ್ತು. ಸರಿ ಬಿಡು ಎಂದುಕೊಂಡು ಕಚೇರಿಗೆ ಬಂದು ಯಥಾಪ್ರಕಾರ ಚುರುಮುರಿ ವೆಬ್ ಸೈಟಿಗೆ ಹೋದರೆ ಅಲ್ಲೂ ಖಾರಾ ಬಾತ್ ಕೇಸರಿ ಬಾತು ಸಮಾಚಾರ !
ಕರ್ನಾಟಕದ ಮಾನ್ಯ ಮುಖ್ಯಮಂತ್ರಿ, ಸಸ್ಯಾಹಾರಿ ಬಿಎಸ್ ಯಡಿಯೂರಪ್ಪ ಅವರು ನಿನ್ನೆ ಭಾನುವಾರ ಗಾಂಧೀಬಜಾರಿನ ವಿದ್ಯಾರ್ಥಿ ಭವನದಲ್ಲಿ ಖಾರಾ ಬಾತ್ ಕೇಸರಿ ಬಾತ್ ತಿಂದರೆಂತಲೂ, ಅವರ ಜತೆಯಲ್ಲಿ ಅವರ ಮಗನೂ ಹಾಗೂ ಲೋಕಸಭಾ ಸದಸ್ಯ ಪಿ ಸಿ ಮೋಹನ್ ಇದ್ದರೆಂತಲೂ ಚುರುಮುರಿಯವರು ವರದಿ ಹಾಕಿದ್ದರು. ಅಂತೂ, ನಿನ್ನೆ ಸಂಜೆಯತನಕ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಸುಳಿದಾಡುತ್ತಿದ್ದ ಈ ಸುದ್ದಿ ಸೋಮವಾರ ಬೆಳಗ್ಗೆ ಲೋಕಾರ್ಪಣೆಯಾಯಿತು.
ಸದ್ಯದಲ್ಲೇ ಅಂಕಿತ ಪ್ರಕಾಶನಕ್ಕೆ ಹೋಗುವ ಕೆಲಸ ಇಟ್ಟುಕೊಂಡಿದ್ದೇನೆ. ಹೋದಾಗ ಖಂಡಿತ ವಿದ್ಯಾರ್ಥಿ ಭವನಕ್ಕೆ ಹೋಗಿ ಬರುತ್ತೇನೆ. ಡಾ ರಾಜ್ ಕುಮಾರ್ ರವರು ದೋಸೆ ತಿನ್ನುತ್ತಿರುವ ಫೋಟೋ ಮತ್ತು ಈಗ ವಿದೇಶಾಂಗ ಖಾತೆ ಸಚಿವರಾಗಿರುವ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ದೋಸೆ ಮುರಿಯುತ್ತಿರುವ ಫೋಟೋಗಳು ಹೋಟೆಲ್ ಗೋಡೆಯ ಮೇಲೆ ರಾರಾಜಿಸುತ್ತಿದ್ದುದು ನೆನಪಿದೆ. ವಿದ್ಯಾರ್ಥಿ ಭವನ್ ಹಾಲ್ ಆಫ್ ಫೇಮ್ ನಲ್ಲಿ ಯಡಿಯೂರಪ್ಪನವರು ಖಾರಾ ಬಾತ್ ಪ್ಲೇಟಿನ ಮುಂದೆ ಕುಳಿತಿರುವ ಫೋಟೋವನ್ನು ಕೂಡಾ ಹೋಟೆಲ್ ಮ್ಯಾನೇಜ್ ಮೆಂಟಿನವರು ಗೋಡೆ ಮೇಲೆ ಹಾಕಿರುತ್ತಾರಾ?ಎನ್ನುವುದು ನನ್ನ ಕುತೂಹಲ.
ಗ್ಯಾಲರಿ: ವಿದ್ಯಾರ್ಥಿ ಭವನ ಮಾಣಿ ಜತೆ ಸಿಎಂ
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications