ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಲಪ್ಪ ಪ್ರಕರಣ ಸಿಬಿಐ ತನಿಖೆ ಇಲ್ಲ : ಆಚಾರ್ಯ

By Mrutyunjaya Kalmat
|
Google Oneindia Kannada News

VS Acharya
ಮಂಗಳೂರು, ಮೇ. 5 : ರಾಜ್ಯದ ಸಿಐಡಿ ಅಧಿಕಾರಿಗಳ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಅತ್ಯಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಅಗತ್ಯವೇ ಇಲ್ಲ ಎಂದು ಗೃಹ ಸಚಿವ ವಿ ಎಸ್ ಆಚಾರ್ಯ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿದೆ. ಯಾವ ಪ್ರಭಾವವೂ ಇಲ್ಲದೇ ತನಿಖೆ ನಡೆಯಲಿದೆ. ಅಲ್ಲದೇ ಸತ್ಯ ಹೊರಬರಲಿದೆ ಎಂದರು. ಮುಂಬರುವ ಗ್ರಾಮ ಪಂಚಾಯತ್ ಚುನಾವಣೆ ಮೇಲೆ ಈ ಪ್ರಕರಣ ಯಾವ ಪರಿಣಾಮವೂ ಬೀರುವುದಿಲ್ಲ. ಆರೋಪ ಬಂದಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹರತಾಳು ಹಾಲಪ್ಪ ಅವರ ಕೆಲಸ ಸಮರ್ಥಿನೀಯ ಎಂದು ಆಚಾರ್ಯ ಹೇಳಿದರು.

ಹಾಲಪ್ಪ ಅವರ ಮೇಲೆ ಗಂಭೀರ ಆರೋಪ ಬಂದಿದೆ. ಈ ಪ್ರಕರಣದಿಂದ ಅವರನ್ನು ಬಚಾವ್ ಮಾಡುವ ಯಾವ ಕೆಲಸವೂ ಸರಕಾರ ಮಾಡುತ್ತಿಲ್ಲ. ಸತ್ಯ ಹೊರಗೆ ಬರಬೇಕು ಎನ್ನುವುದು ಸರಕಾರದ ಆಶಯ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೆಲಸ ಮಾಡಲಿದೆ. ಆದರೆ, ಪ್ರತಿಪಕ್ಷಗಳು ಆಗ್ರಹಿಸುವಂತೆ ಹಾಲಪ್ಪ ಅತ್ಯಾಚಾರ ಪ್ರಕರಣನ್ನು ಸಿಬಿಐ ತನಿಖೆ ವಹಿಸಲು ಸಾಧ್ಯವಿಲ್ಲ. ರಾಜ್ಯ ಸಿಐಡಿ ಇಲಾಖೆ ಸಮರ್ಥವಾಗಿದೆ ಎಂದು ಅವರು ಪ್ರತಿಪಾದಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X