ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಿರೀಕ್ಷಣಾ ಜಾಮೀನಿಗೆ ಹಾಲಪ್ಪ ಅರ್ಜಿ
ಹಾಲಪ್ಪ ಪರ ವಕೀಲರು ಇಂದು ನ್ಯಾಯಾಲಯಕ್ಕೆ ಹಾಜರಾಗಿ ನಮ್ಮ ಕಕ್ಷಿದಾರ ಮಾಜಿ ಸಚಿವ ಹರತಾಳು ಹಾಲಪ್ಪ ಅವರಿಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ನ್ಯಾಯಾಯಲಕ್ಕೆ ಮನವಿ ಮಾಡಿಕೊಂಡಿದ್ದಾರೆ. ಮಾಜಿ ಸಚಿವ ಹಾಲಪ್ಪ ತಮ್ಮ ಸ್ನೇಹಿತ ವೆಂಕಟೇಶ್ ಮೂರ್ತಿ ಎಂಬುವವರ ಪತ್ನಿ ಚಂದ್ರಾವತಿ ಅವರನ್ನು ಅತ್ಯಾಚಾರ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಇದರ ಬಸವರಾಜ್ ಮತ್ತು ಗಿರೀಶ್ ಎಂಬುವವರ ಮೇಲೂ ಈ ಆರೋಪ ಹೊರಿಸಲಾಗಿದೆ.
ಪ್ರಕರಣ ಬೆಳಕಿಗೆ ಬಂದ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಾಲಪ್ಪ, ಮರುದಿನ ಟಿವಿಗಳಲ್ಲಿ ಕಾಣಿಸಿಕೊಂಡು ಪ್ರಕರಣದಲ್ಲಿ ತಮ್ಮ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರಿಗೆ ಬಂದ ನಂತರ ಅವರನ್ನು ಬೇಟಿ ಮಾಡಿ ಚರ್ಚಿಸಿದ ಮೇಲೆ ಹಾಲಪ್ಪ ನಾಪತ್ತೆಯಾಗಿದ್ದಾರೆ. ಸದ್ಯ ಅವರು ಎಲ್ಲಿದ್ದಾರೆ ಎಂದು ಗೊತ್ತಿಲ್ಲ. ಘಟನೆ ಬೆಳಕಿಗೆ ಬಂದು 72 ಗಂಟೆ ಕಳೆದಿದ್ದರೂ ಅತ್ಯಾಚಾರ ಆರೋಪ ಎದುರಿಸುತ್ತಿರುವ ಆರೋಪಿಯನ್ನು ಬಂಧಿಸಿಲ್ಲ.
Comments
ಹರತಾಳು ಹಾಲಪ್ಪ ಅತ್ಯಾಚಾರ ಶಿವಮೂಗ್ಗ ನಿರೀಕ್ಷಣಾ ಜಾಮೀನು ಯಡಿಯೂರಪ್ಪ ಸಿಐಡಿ ಚಂದ್ರಾವತಿ haratal halappa sex scandal rape anticipatory bail cid probe yediyurappa chandravati shivamogga
Story first published: Wednesday, May 5, 2010, 15:10 [IST]