Get Updates
Get notified of breaking news, exclusive insights, and must-see stories!

ಬಿರು ಬಿಸಿಲಿನಲ್ಲಿ ದುಡಿವ ಬಾಲಕಾರ್ಮಿಕರು!

 Child Labour existence in Savanur
ಸವಣೂರ, ಏ.22 : 50 ವರ್ಷಗಳಿಂದ ಅಭಿವೃದ್ದಿ ವಂಚಿತವಾಗಿರುವ ಸವಣೂರ ಪಟ್ಟಣವನ್ನು 5 ವರ್ಷಗಳನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸುವ ಅತ್ಯುತ್ಸಾಹಕ್ಕೆ ಒಳಗಾಗಿರುವ ಸವಣೂರ ಪುರಸಭೆ, ಅಬಾಲವೃದ್ದರನ್ನೂ ತನ್ನ ಉದ್ದೇಶಗಳ ಈಡೇರಿಕೆಗಾಗಿ ಬಳಸಿಕೊಳ್ಳುತ್ತಿದೆ.

ಕ್ಷೇತ್ರದ ಶಾಸಕ ರಾಜ್ಯದ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರ ಕೃಪಾ ಕಟಾಕ್ಷಕ್ಕೆ ಒಳಗಾಗಿರುವ ಸವಣೂರ ಪುರಸಭೆಗೆ ದಾಖಲೆಯ ಪ್ರಮಾಣದಲ್ಲಿ ಅನುದಾನದ ಒಳಹರಿವು ಆರಂಭಗೊಂಡಿದೆ. ಪರಿಣಾಮ ಕಾಮಗಾರಿಗಳ ಕಳಪೆತನವನ್ನೂ ಲೆಕ್ಕಿಸದ ಪುರಸಭೆಯ ಅಧಿಕಾರಿಗಳು ಹಾಗೂ ಪುರಪಿತ್ರುಗಳು, ಏಕಾಏಕಿ ನಗರದ ಎಲ್ಲ ವಾರ್ಡ್ ಗಳಲ್ಲಿಯೂ ಅಭಿವೃದ್ದಿ ಪಥ ನಿರ್ಮಿಸುತ್ತಿದ್ದಾರೆ.

ಇದರೊಂದಿಗೆ ಕೂಲಿ ಕಾರ್ಮಿಕರ ಕೊರತೆಯನ್ನು ಸರಿದೂಗಿಸುವ ಭರದಲ್ಲಿ ಬಾಲ ಕಾರ್ಮಿಕರನ್ನೂ ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದ್ದಾರೆ. ಮಾರ್ಚ್ -ಏಪ್ರಿಲ್ ತಿಂಗಳ ಬಿರು ಬಿಸಲಿನಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಹೊಸ ಅನುದಾನದ ನಿರೀಕ್ಷೆಯಲ್ಲಿರುವ ಸ್ಥಳೀಯ ಪುರಸಭೆ, ಎಲ್ಲ ಕಾನೂನು ಚೌಕಟ್ಟುಗಳನ್ನೂ ಮೀರುತ್ತಿದ್ದರೂ, ದಿಕ್ಕು ತಪ್ಪಿದ ನಾವೆಯಂತಾಗಿರುವ ಸವಣೂರಿನ ಆಡಳಿತ ಯಂತ್ರ ಮಾತ್ರ ಗಾಢ ಮೌನಧರಿಸಿದೆ. ನಗರದ ಅಭಿವೃದ್ದಿಗೆ 10 ಕೋಟಿ ರೂಗಳ ಆರಂಭಿಕ ಅನುದಾನ ನೀಡಿರುವ ಸಚಿವ ಬಸವರಾಜ ಬೊಮ್ಮಾಯಿ, ಅಧಿಕಾರಿಗಳ ವರ್ತನೆಗೂ ಅಂಕುಶ ಹಾಕಬೇಕಾಗಿರುವ ಅಗತ್ಯ ಎದುರಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+