ನೇತ್ರಾವತಿ ತಿರುಗಿಸಿದರೆ ಬದುಕು ದುಸ್ತರ : ಹೆಗ್ಗಡೆ
ಧರ್ಮಸ್ಥಳ ಸಮೀಪದ ನೇತ್ರಾವತಿ ಸ್ನಾನಘಟ್ಟಕ್ಕೆ ಮಂಗಳವಾರ ಆಗಮಿಸಿ, ಅಲ್ಲಿನ ನೀರಿನ ಒಳ ಹರಿವು ಪರಿಸ್ಥಿತಿ ಅವಲೋಕಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರಕಾರ ನದಿ ತಿರುಗಿಸುವ ಪ್ರಸ್ತಾವನೆಯನ್ನು ಕೈಬಿಟ್ಟು ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಿಡುವ ಕೆಲಸ ಮಾಡುವುದೊಳಿತು ಎಂದು ಸಲಹೆ ಮಾಡಿದರು.
ಕಿಂಡಿ ಅಣೆಕಟ್ಟು ಬೇಕು: ನೇತ್ರಾವತಿ ನದಿಗೆ ಕಿರು ಅಣೆಕಟ್ಟುಗಳನ್ನು ಕಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಜಲಕ್ಷಾಮವನ್ನು ಪರಿಹರಿಸಬಹುದು. ಅಣೆಕಟ್ಟುಗಳನ್ನು ಕಟ್ಟುವ ಬಗ್ಗೆ ಸರಕಾರ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಈಗಾಗಲೇ ನೇತ್ರಾವತಿ ನದಿಯಲ್ಲಿ ಹರಿವಿನ ಕೊರತೆ ಕಂಡುಬರುತ್ತಿದೆ.
ಮಳೆಗಾಲದಲ್ಲಿ
ಈ
ನದಿಯ
ನೀರನ್ನು
ಸಂಗ್ರಹಿಸು
ವುದು
ಅಗತ್ಯ.
ಅದಕ್ಕಾಗಿ
ಸಣ್ಣ
ಸಣ್ಣ
ಅಣೆಕಟ್ಟು
ಗಳನ್ನು
ಕಟ್ಟಿ
ಮಳೆ
ನೀರನ್ನು
ಸಂಗ್ರಹಿಸಿ
ಅದನ್ನು
ಬೇಸಿಗೆಯಲ್ಲಿ
ಉಪಯೋಗಿಸಲು
ವ್ಯವಸ್ಥೆ
ಮಾಡಬೇಕು.
ಇದಕ್ಕೆಲ್ಲ
ಪರಿಹಾರ
ಅಣೆಕಟ್ಟು
ಮಾತ್ರ.
ದೊಡ್ಡ
ಅಣೆಕಟ್ಟುಗಳಿಗಿಂತ
ಕಿರು-ಕಿಂಡಿ
ಅಣೆಕಟ್ಟುಗಳೇ
ಹೆಚ್ಚು
ಸೂಕ್ತವಾಗಬಲ್ಲುದು
ಮತ್ತು
ಇವು
ಕಡಿಮೆ
ಖರ್ಚುದಾಯಕವೂ
ಹೌದು
ಎಂದರು.
ಅಣೆಕಟ್ಟುಗಳಿಂದ ಜಲ ಮರು ಪೂರಣಕ್ಕೆ ಪ್ರಯೋಜನವಾದೀತು. ಇದರಿಂದ ನದಿ ಪಾತ್ರದ ನೂರಾರು ಕೃಷಿಕರಿಗೂ ಪ್ರಯೋಜನವಾಗುತ್ತದೆ. ನೇತ್ರಾವತಿ ನದಿಯ ಹರಿವು ಕಡಿಮೆಯಾಗುತ್ತಿರುವುದರಿಂದ ಮರಳಿನ ಅಭಾವವೂ ತಲೆದೋರುತ್ತಿದೆ. ಇದರಿಂದ ವಿವಿಧ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳಲಿವೆ ಎಂದು ಆತಂಕ ವ್ಯಕ್ತಪಡಿಸಿದರು.