ಮಾವೋವಾದಿಗಳಿಗೆ ಹೆದರಿದ ಸರಕಾರ!

ಮಾವೋವಾದಿಗಳು ನಡೆಸಿದ ಭೀಕರ ಹತ್ಯಾಕಾಂಡದಿಂದ ಯೋಧರಲ್ಲಿ ಭಯ ಹುಟ್ಟಿರುವದಂತೂ ನಿಜ. ಈ ಬಗ್ಗೆ ಸಿಆರ್ ಪಿಎಫ್ ಅಧಿಕಾರಿಗಳು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾರೆ. ನಾವು ಈ ಬಗ್ಗೆ ಏನನ್ನೂ ಹೇಳಲು ತಯಾರಿಲ್ಲ. ಇದಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿರುವ ನಮ್ಮ ಹಿರಿಯ ಅಧಿಕಾರಿಗಳನ್ನು ಕೇಳಿ ಎಂದು ಛತ್ತೀಸ್ ಗಢ್ ದಲ್ಲಿರುವ ಸಿಆರ್ ಪಿಎಫ್ ಪಡೆ ಮುಖ್ಯಸ್ಥರ ಅಭಿಪ್ರಾಯವಾಗಿದೆ.
ಛತ್ತೀಸ್ ಗಢ್ ಪೊಲೀಸರು ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರಲ್ಲಿ ಸಿಆರ್ ಪಿಎಫ್ ಪಾಲ್ಗೊಳ್ಳುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಳೆದ ಮಂಗಳವಾರ ಮಾವೋವಾದಿಗಳು 75 ಸಿಆರ್ ಪಿಎಫ್ ಯೋಧರು ಹಾಗೂ ಒಬ್ಬ ಛತ್ತೀಸ್ ಗಢ್ ದ ಪೇದೆಯನ್ನು ನಿರ್ದಯವಾಗಿ ಕೊಂದು ಹಾಕಿದ್ದರು. ಈ ಪ್ರಕರಣದಿಂದ ಇಡೀ ದೇಶವೇ ತಲ್ಲಣಗೊಂಡಿತ್ತು. ಘಟನೆಯ ಹೊಣೆ ಹೊತ್ತಿದ್ದ ಗೃಹ ಸಚಿವ ಪಿ ಚಿದಂಬರಂ ರಾಜೀನಾಮೆ ನೀಡಲು ಮುಂದಾಗಿದ್ದರು.












Click it and Unblock the Notifications