ನಡೆದಾಡುವ ದೇವರಿಗೀಗ 103 ವರ್ಷ
ತುಮಕೂರು,
ಮಾ.31 : ಇಂದಿನ ಮಠಾಧೀಶರಲ್ಲಿ ಸಾಧನೆ ಕಡಿಮೆಯಾಗುತ್ತಿದೆ ಎಂದು ಸಿದ್ದಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು. 2010, ಏಪ್ರಿಲ್ 1ಕ್ಕೆ 102 ವರ್ಷಗಳನ್ನು ಪೂರೈಸುವ ಶ್ರೀಗಳು ತಮ್ಮ ಶತಮಾನದ ಅನುಭವವನ್ನು ಪತ್ರಿಕೆಯೊಂದಕ್ಕೆ ಹಂಚಿಕೊಂಡರು. id="toptextpromo">ಮಠಾಧೀಶರು
ಮೊದಲು ಸಚ್ಚಾರಿತ್ರ್ಯವಂತರಾಗಿ, ಆತ್ಮಸಂಯಮಿಗಳಾಗಿರಬೇಕು. ಸೇವಾ ಮನೋಭಾವ ಹೊಂದಿ ಜನ ಸಮುದಾಯದ ನೋವು ನಲಿವಿಗೆ ಸ್ಪಂದಿಸಬೇಕು ಎಂದು ಮಠಾಧೀಶರಿಗೆ ಸಲಹೆ ನೀಡಿದರು. ಬಸವಾದಿ ಶಿವಶರಣರು, ಶ್ರೀಮಠದ ಗುರು ಪರಂಪರೆ, ಅರವಿಂದರು, ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ತಮ್ಮ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳು ಎಂದು ಈ ಸಂದರ್ಭದಲ್ಲಿ ಶ್ರೀಗಳು ನೆನೆಪಿಸಿಕೊಂಡರು. id='are-slot-1' class='oiad oi-axt oiadv'> id='top-searched-articles'>ಜಾತೀಯತೆ
ಒಂದು ಪಿಡುಗು, ಜಾತಿ ವಿಷಯದಲ್ಲಿ ವಿದ್ಯಾವಂತರೇ ಅಲ್ಪಜ್ಞಾನಿಗಳಾಗುತ್ತಿದ್ದಾರೆ. ಜನ ಸಾಮಾನ್ಯರು ತಿಳಿವಳಿಕೆ ಹೊಂದಿ, ಜಾತ್ಯಾತೀತರಾಗಿ ಬದುಕುವ ಪ್ರಯತ್ನ ಮಾಡಬೇಕು ಎಂದು ಶಿವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.











Click it and Unblock the Notifications