ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಕ್ ಸ್ಟಂಟ್ ಮಾಡಿ ಪ್ರಾಣತೆತ್ತ ಯುವಕರು

By Mahesh
|
Google Oneindia Kannada News

Bike accident
ಬೆಂಗಳೂರು, ಮಾ.29: ಬೈಕ್ ಸ್ಟಂಟ್, ಡ್ರಾಗ್ ರೇಸ್, ವ್ಹೀಲಿಂಗ್ ಮಾಡುವುದನ್ನು ನಿಷೇಧಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿದರೂ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಸಾಹಸಗಳು ನಡೆಯುತ್ತಲೇಇವೆ. ಹಾಗೆ , ಯುವಕರು ಸ್ಟಂಟ್ ಮಾಡಲು ಹೋಗಿ ಸಾವಿನ ಮನೆಯ ಕದ ತಟ್ಟುತ್ತಲೇ ಇದ್ದಾರೆ. ಭಾನುವಾರ ಸಂಜೆ ಕೂಡ ಇಂಥಾ ದುರ್ಘಟನೆ ನಡೆಯಿತು.

ವ್ಹೀಲಿಂಗ್ ಮಾಡುತ್ತಾ ಜಾಲಿ ರೈಡ್ ನಲ್ಲಿದ್ದ ಬೈಕ್ ನಿಯಂತ್ರಣ ಕಳೆದುಕೊಂಡ ದ್ವಿಚಕ್ರ ವಾಹನ ರಸ್ತೆ ವಿಭಜಕಕ್ಕೆ ಬಡಿದು , ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ದಿನೇಶ್ ಅಲಿಯಾಸ್ ಕೃಷ್ಣೇಗೌಡ (24) ಹಾಗೂ ಸಾಗರ್ (23) ಮೃತರು. ಇಬ್ಬರೂ ಬಿಹಾರ ಮೂಲದವರು ಎನ್ನಲಾಗಿದೆ. ಕಂಠೀರವ ಸ್ಟುಡಿಯೋ ಎದುರು ಈ ಅಪಘಾತ ಸಂಭವಿಸಿದ್ದು, ರಾಜಾಜಿನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಂದಿನಿ ಲೇಔಟ್ ನ ಖಾಸಗಿ ಕಂಪೆನಿಯಲಿ ಕೆಲಸ ನಿರ್ವಹಿಸುತ್ತಿದ್ದ ಸಾಗರ್, ರಾಜಾಜಿನಗರದ ನಿವಾಸಿಯಾಗಿದ್ದರು. ದಿನೇಶ್ ಡೈವರ್ ಆಗಿ ಕೆಲಸ ಮಾಡುತ್ತಿದ್ದರು. ಬಿಬಿಎಂಪಿ ಚುನಾವಣೆಯಂದು ಮತದಾನ ಮಾಡಿ ಹಿಂದುರುಗುವಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X