ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೈಕ್ ಸ್ಟಂಟ್ ಮಾಡಿ ಪ್ರಾಣತೆತ್ತ ಯುವಕರು
ವ್ಹೀಲಿಂಗ್ ಮಾಡುತ್ತಾ ಜಾಲಿ ರೈಡ್ ನಲ್ಲಿದ್ದ ಬೈಕ್ ನಿಯಂತ್ರಣ ಕಳೆದುಕೊಂಡ ದ್ವಿಚಕ್ರ ವಾಹನ ರಸ್ತೆ ವಿಭಜಕಕ್ಕೆ ಬಡಿದು , ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ದಿನೇಶ್ ಅಲಿಯಾಸ್ ಕೃಷ್ಣೇಗೌಡ (24) ಹಾಗೂ ಸಾಗರ್ (23) ಮೃತರು. ಇಬ್ಬರೂ ಬಿಹಾರ ಮೂಲದವರು ಎನ್ನಲಾಗಿದೆ. ಕಂಠೀರವ ಸ್ಟುಡಿಯೋ ಎದುರು ಈ ಅಪಘಾತ ಸಂಭವಿಸಿದ್ದು, ರಾಜಾಜಿನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಂದಿನಿ ಲೇಔಟ್ ನ ಖಾಸಗಿ ಕಂಪೆನಿಯಲಿ ಕೆಲಸ ನಿರ್ವಹಿಸುತ್ತಿದ್ದ ಸಾಗರ್, ರಾಜಾಜಿನಗರದ ನಿವಾಸಿಯಾಗಿದ್ದರು. ದಿನೇಶ್ ಡೈವರ್ ಆಗಿ ಕೆಲಸ ಮಾಡುತ್ತಿದ್ದರು. ಬಿಬಿಎಂಪಿ ಚುನಾವಣೆಯಂದು ಮತದಾನ ಮಾಡಿ ಹಿಂದುರುಗುವಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.
Comments
Story first published: Monday, March 29, 2010, 11:29 [IST]