ಕೊಡವರಿಗೆ ಕನ್ನಡ ಪುಸ್ತಕದಲ್ಲಿ ಅಪಮಾನ

Kodava woman in traditional costume
ಮಡಿಕೇರಿ, ಮಾ. 26 : ಕಾಲೇಜು ಉಪನ್ಯಾಸಕರೊಬ್ಬರು ರಚಿಸಿರುವ ಕನ್ನಡ ಪುಸ್ತಕದಲ್ಲಿ ತಮ್ಮ ಸಮಾಜದವರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಕೊಡವರು ಸಿಟ್ಟಿಗೆದ್ದಿದ್ದಾರೆ. ಈ ಕೂಡಲೇ ಲೇಖಕರು ಕ್ಷಮಾಪಣೆ ಕೇಳಬೇಕು ಇಲ್ಲವಾದರೆ ಪ್ರತಿಭಟನೆ ಶುರುಹಚ್ಚಿಕೊಳ್ಳಲಾಗುವುದು ಎಂದು ಕೊಡವ ಸಮಾಜಕ್ಕೆ ಸೇರಿದ ಜನತೆ ಎಚ್ಚರಿಕೆ ಕೊಟ್ಟಿದ್ದಾರೆ.

ಅವರ ಹೆಸರು ಡಾ ಜೆ ಸೋಮಣ್ಣ. ಬಲೆಲೆ ಎಂಬ ಗ್ರಾಮದಲ್ಲಿರುವ ಕಿರಿಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ. ಅವರು ಬರೆದ ಪುಸ್ತಕದ ಹೆಸರು 'ದಲಿತ-ಕೊಡವ ನೋವು ನಲಿವು'. ಲೇಖಕರು ಕೃತಿ ರಚಿಸಿ, ಪುಸ್ತಕ ಬಿಡುಗಡೆಯಾಗಿ ಮೂರು ವರ್ಷಗಳು ಸಂದಿವೆ. ಇತ್ತೀಚೆಗೆ ಯಾರೋ ಕೊಡವರೊಬ್ಬರು ಆ ಪುಸ್ತಕವನ್ನು ತಿರುವಿ ಹಾಕುತ್ತಿದ್ದಾಗ ಕೊಡವರನ್ನು ಹೀಯಾಳಿಸಿ ಬರೆಯಲಾಗಿದೆ ಎಂಬ ಅಂಶವನ್ನು ಆಕಸ್ಮಾತ್ತಾಗಿ ಪತ್ತೆ ಹಚ್ಚಿದರು.

ಕೊಡವ ಮಹಿಳೆಯರು ಸೀರೆ ಧರಿಸುವ ಶೈಲಿಯನ್ನು ಟೀಕಿಸುವ ಮತ್ತು ಕೊಡವರ ದೇವತೆ ಕಾವೇರಿಯನ್ನು ಅಪಮಾನಗೊಳಿಸುವ ಸಾಲುಗಳು ಆ ಕೃತಿಯಲ್ಲಿ ಇವೆ ಎಂದು ಓದಿದವರು ಆರೋಪಿಸುತ್ತಿದ್ದಾರೆ. ಕೃತಿಯಲ್ಲಿರುವ ಸಂಗತಿಗಳು ಕಪೋಲ ಕಲ್ಪಿತವಾಗಿವೆ. ಸತ್ಯಕ್ಕೆ ದೂರವಾಗಿದೆ ಎಂದು ಬಲೆಲೆ ಕೊಡವ ಸಮಾಜದ ಸದಸ್ಯರು ಆಪೋರ ಮಾಡಿದ್ದಾರೆ.

ಈ ಸಂಬಂಧ ಪ್ರತಿಭಟನೆ ಮಾಡಲು ನಿಶ್ಚಯಿಸಿರುವ ಕೊಡವರು ಮಾರ್ಚ್ 29ರಂದು ಬಲೆಲೆ ಬಂದ್ ಆಚರಣೆಗೆ ಕರೆ ನೀಡಿದ್ದಾರೆ. ಕೊಡವರನ್ನು ಈ ರೀತಿ ಅಪಮಾನ ಮಾಡುವುದನ್ನು ತಾವು ಸಹಿಸುವುದಿಲ್ಲ ಎಂದು ಕೊಡವ ಸಮಾಜದ ಅಧ್ಯಕ್ಷ ಮಲಚಿರ ಬೋಸು ಮಡಿಕೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+