ಮಾ.27ರಂದು ಎಸ್ಐಟಿ ಮುಂದೆ ಮೋದಿ

2002 ರಲ್ಲಿ ನಡೆದ ಗುಜರಾತ್ ನರಮೇಧದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಕೈವಾಡವಿದೆ ಎನ್ನುವ ಆರೋಪದಿಂದ ಸುಪ್ರಿಂಕೋರ್ಟ್ ಹಿರಿಯ ಐಎಎಸ್ ಅಧಿಕಾರಿ ಆರ್ ಕೆ ರಾಘವನ್ ನೇತೃತ್ವದ ವಿಶೇಷ ತನಿಖೆ ಸಮಿತಿ ರಚಿಸಿತ್ತು. ಕಳೆದ 21 ಕ್ಕೆ ಮೋದಿ ಅವರು ವಿಶೇಷ ತನಿಖೆ ತಂಡದ ಎದುರು ಪಾಲ್ಗೊಂಡು ವಿಚಾರಣೆ ಎದುರಿಸಬೇಕಿತ್ತು. ಆದರೆ, ಮೋದಿ ವಿಚಾರಣೆಗ ಪಾಲ್ಗೊಂಡಿರಲಿಲ್ಲ. ಇದು ದೇಶಾದ್ಯಂತ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿತ್ತು. ಮೋದಿ ಅವರಿಗೆ ಸಂವಿಧಾನದಲ್ಲಿ ನಂಬಿಕೆಯಿಲ್ಲ ಎನ್ನುವ ಟೀಕೆಗಳು ಬಲವಾಗಿ ಕೇಳಿ ಬಂದಿದ್ದವು.
ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಮಾರ್ಚ್ 27 ರಂದು ವಿಶೇಷ ತನಿಖೆ ಸಮಿತಿ ನಡೆಸುವ ವಿಚಾರಣೆಗೆ ಮುಖ್ಯಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ಅವರ ವಕೀಲ ಮಹೇಶ್ ಜೇಠ್ಮಲಾನಿ ಸ್ಪಷ್ಟಪಡಿಸಿದ್ದಾರೆ. ಗುಜರಾತ್ ನರಮೇಧದಲ್ಲಿ ಕಾಂಗ್ರೆಸ್ ಸಂಸದ ಎಹಸಾನ್ ಜಾಫ್ರಿ ಅವರ ಹತ್ಯೆಯಲ್ಲಿ ಮುಖ್ಯಮಂತ್ರಿ ಮೋದಿ ಅವರ ಕೈವಾಡವಿದೆ ಎಂದು ಆರೋಪಿಸಿ ಜಾಕಿಯಾ ಜಾಫ್ರಿ ಅವರು ಸುಪ್ರಿಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.












Click it and Unblock the Notifications