ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಿತ್ಯಾನಂದನ ಕೇಸ್ ಸಿಐಡಿಗೆ, ಇನ್ಫಂಟ್
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಆರ್ ಇನ್ಫಂಟ್, ನಿತ್ಯಾನಂದನ ಪ್ರಕರಣವನ್ನು ತಮಿಳುನಾಡು ಸರಕಾರಕ್ಕೆ ರಾಜ್ಯಕ್ಕೆ ವರ್ಗಾಯಿಸಿದೆ. ನಿತ್ಯಾನಂದನ ಆಶ್ರಮ ನಿತ್ಯಾನಂದ ಧ್ಯಾನಪೀಠಮ್ ಬಿಡದಿಯಲ್ಲಿದೆ. ಬಿಡದಿ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿದ್ದು, ಸಂಬಂಧಪಟ್ಟ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಿತ್ಯಾನಂದನ ಹಗರಣದ ಸಮಗ್ರ ತನಿಖೆ ನಡೆಸಲು ನಿರ್ಧರಿಸಲಾಗಿದ್ದು, ಪ್ರಕರಣವನ್ನು ಸಿಐಡಿಗೆ ವಹಿಸುವ ಚಿಂತನೆ ನಡೆಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ನಿತ್ಯಾನಂದನ ರಾಸಲೀಲೆ ಪ್ರಕರಣ ಬೆಳಕಿಗೆ ಬಂದ ನಂತರ ತಮಿಳುನಾಡು ಪೊಲೀಸ್ ಆತನ ವಿರುದ್ದ ಭಾರತೀಯ ದಂಡ ಸಂಹಿತೆಯ 295(ಎ), 420, 376, 377, 506(1) ಹಾಗೂ 120(ಬಿ) ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ನಿತ್ಯಾನಂದನ ಅನುಯಾಯಿಯಾಗಿದ್ದ ಲೆನಿನ್ ಕುರುಪ್ಪನ್ ಅಲಿಯಾಸ್ ಪ್ರೇಮಾನಂದನ ಹೇಳಿಕೆ ಆಧರಿಸಿ ಈ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಮಿಳುನಾಡು ಪೊಲೀಸರು ಹೇಳಿದ್ದಾರೆ.
Comments
ಸ್ವಾಮಿ ನಿತ್ಯಾನಂದ ರಾಸಲೀಲೆ ಕರ್ನಾಟಕ ಬಿಡದಿ ತಮಿಳುನಾಡು ಸಿಐಡಿ ರಂಜಿತಾ swami nithyananda sex scandal karnataka bidadi tamil nadu cid ranjitha ಸ್ವಾಮೀಜಿ
Story first published: Friday, September 24, 2010, 18:39 [IST]