ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೋಧ್ರಾ ಗಲಭೆ, ಮೋದಿಗೆ ಸಮನ್ಸ್
ಮಾರ್ಚ್ 21ರಂದು ವಿಚಾರಣೆಗೆ ಹಾಜರಾಗುವಂತೆ ಮೋದಿ ಅವರಿಗೆ ಸುಪ್ರೀಂಕೋರ್ಟ್ ನಿಯೋಜಿಸಿರುವ ವಿಶೇಷ ತನಿಖಾ ತಂಡ (SIT) ಗುರುವಾರ (ಮಾ.11 ) ಸಮನ್ಸ್ ಜಾರಿ ಮಾಡಿದೆ. ಸಂಸದ ಜಾಫ್ರಿ ಕೊಲೆಗೆ ಸಂಬಂಧಿಸಿದಂತೆ ಮಾತ್ರ ಮೋದಿ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಇದುವರೆಗೆ ಸಂಗ್ರಹಿಸಿರುವ ಸಾಕ್ಷ್ಯಾಧಾರಗಳನ್ನು ಆಧರಿಸಿ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ತನಿಖಾ ತಂಡದ ಮುಖ್ಯಸ್ಥ ರಾಘವನ್ ಹೇಳಿಕೆ ನೀಡಿದ್ದಾರೆ.
ಅಂದಿನ ಗುಜರಾತ್ ಹಿಂಸಾಚಾರವನ್ನು ನೆನೆಪಿಸಿಕೊಂಡಿರುವ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ, ದೇಶ ಸ್ವಾಂತಂತ್ರ್ಯಕಂಡ ನಂತರ ಇಂಥ ಹಿಂಸಾಚಾರವನ್ನು ಎಂದೂ ಕಂಡಿರಲಿಲ್ಲ. ಅಂದಿನ ಹಿಂಸಾಚಾರದಲ್ಲಿ ಗುಜರಾತ್ ಸರಕಾರದ ನೇರ ಪಾತ್ರವಿದೆ. ಮೋದಿ ರಾಜಿನಾಮೆ ನೀಡಬೇಕೆಂದು ತಿವಾರಿ ಆಗ್ರಹಿಸಿದ್ದಾರೆ.
Comments
Story first published: Friday, March 12, 2010, 10:11 [IST]