ದೆಹಲಿಗೆ ಹೊರಟ ರೈತರ ರೈಲಿಗೆ ಕಲ್ಲುತೂರಾಟ

ಸೋಮವಾರ ( ಮಾ.8 ) ರಾತ್ರಿ ಈ ರೈಲು ನಾಗ್ಪುರದ ಬಳಿ 15 ನಿಮಿಷ ನಿಂತು ಮುಂದಕ್ಕೆ ಚಲಿಸುತ್ತಿದ್ದಂತೆ ದುಷ್ಕರ್ಮಿಗಳು ಕಲ್ಲು ಮತ್ತು ಬಾಟಲಿಗಳನ್ನು ಕಿಟಕಿ ಮೂಲಕ ಎಸೆದು ಪರಾರಿಯಾಗಿದ್ದಾರೆ. ನೈಸ್ ಯೋಜನೆ ವಿರುದ್ಧ ತಮ್ಮ ಹೋರಾಟವನ್ನು ತೀವ್ರಗೊಳಿಸಲು ಸುಮಾರು 1200 ರೈತರು ದೆಹಲಿಗೆ ತೆರಳಿದ್ದರು.
ಜೆಡಿಎಸ್ ಮುಖಂಡ ಮತ್ತು ಮಾಜಿ ಪ್ರಧಾನಿ ದೇವೇಗೌಡ ಮಾರ್ಗದರ್ಶನದಲ್ಲಿ ಭಾನುವಾರ (ಮಾ.7 ) ರಂದು ಬೆಂಗಳೂರಿನಿಂದ ವಿಶೇಷ ರೈಲಿನಲ್ಲಿ ರೈತರು ದೆಹಲಿಗೆ ಹೊರಟಿದ್ದರು. ಮಾಜಿ ಪ್ರಧಾನಿ ದೇವೇಗೌಡ ಘಟನೆಯನ್ನು ತೀವ್ರವಾಗಿ ಖಂಡಿಸಿ ಇದು ನೈಸ್ ಮಾಲೀಕ ಅಶೋಕ್ ಖೇಣಿ ಬೆಂಬಲಿಗರ ಕೃತ್ಯ ಎಂದು ಆರೋಪಿಸಿದ್ದಾರೆ. ರೈಲಿಗೆ ಈಗ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.












Click it and Unblock the Notifications