ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಡೋಸಲ್ಫಾನ್ ನಿಷೇಧ ಕೇಂದ್ರಕ್ಕೆ ಬಿಟ್ಟದ್ದು

By Mrutyunjaya Kalmat
|
Google Oneindia Kannada News

Yeddyurappa
ಪುತ್ತೂರು, ಮಾ. 1 : ಎಂಡೋಸಲ್ಫಾನ್ ನಿಷೇಧ ಮಾಡೋದು, ಬಿಡೋದು ಕೇಂದ್ರ ಸರಕಾರದ ವಿವೇಚನೆಗೆ ಬಿಟ್ಟದ್ದು. ಆದರೆ, ರಾಜ್ಯದಲ್ಲಿ ಅದರ ದುರ್ಬಳಕೆ ಬಗ್ಗೆ ನನ್ನ ಸರಕಾರ ನಿಗಾ ಇಡುವುದಂತೂ ನಿಜ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಬೆಳ್ತಂಗಡಿ ತಾಲ್ಲೂಕಿನ ಹೋಬಳಿ ಕೇಂದ್ರ ಕೊಕ್ಕಡಕ್ಕೆ ಮೊದಲ ಬಾರಿ ಭೇಟಿ ನೀಡಿದ ಅವರು, 231 ಕುಟುಂಬಗಳ ಮಂದಿಗೆ ತಲಾ 50 ಸಾವಿರ ರುಪಾಯಿ ಪರಿಹಾರ ಧನ, ವಿಕಲಚೇತನರಾದವರಿಗೆ 400 ರಿಂದ ಸಾವಿರ ರುಪಾಯಿ ತನಕ ಮಾಸಾಶನವನ್ನು ಅವರು ವಿತರಿಸಿದರು. ಎಂಡೋಸಲ್ಫಾನ್ ಗೇರು ತೋಟಗಳಿಗೆ ಹತ್ತಿಪ್ಪತ್ತು ವರ್ಷ ಬೇಕಾಬಿಟ್ಟಿ ಸಿಂಪರಣೆ ಮಾಡಿದ್ದರಿಂದ ಕೊಕ್ಕಡ ಮತ್ತು ಸುತ್ತಮುತ್ತಲಿನ 231 ಮಂದಿ ವಿಕಲಚೇತರರಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X