Get Updates
Get notified of breaking news, exclusive insights, and must-see stories!

ಶಿವಮೊಗ್ಗದಲ್ಲಿ ಅಪ್ಪ-ಮಗನ ಪಕ್ಷವಾಗಿರುವ ಬಿಜೆಪಿ

Shanthaveerappa Gowda with other leaders
ಶಿಕಾರಿಪುರ, ಫೆ. 20 : ಬಿಜೆಪಿಯು ಶಿವಮೊಗ್ಗ ಜಿಲ್ಲೆಯಲ್ಲಿ ಯಡಿಯೂರಪ್ಪ ಮತ್ತು ಅವರ ಮಗ ರಾಘವೇಂದ್ರ ಅವರ ಪಕ್ಷವಾಗಿ ಮಾತ್ರ ಉಳಿದಿದೆ. ಯಡಿಯೂರಪ್ಪನವರ ರಾಜಕೀಯ ಉನ್ನತಿಗಾಗಿ ಹಗಲು ರಾತ್ರಿ, ಎಲ್ಲ ಸುಖ ತ್ಯಾಗ ಮಾಡಿ ಶ್ರಮಿಸಿದರೂ ಹಲವು ಮುಖಂಡರಿಗೆ ಸ್ವಾತಂತ್ರ್ಯವಿಲ್ಲ ಎಂದು ಮಾಜಿ ಶಾಸಕ ಶಾಂತವೀರಪ್ಪ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂ.ಎ.ಡಿ.ಬಿ ಅದ್ಯಕ್ಷ ಪದ್ದಣ್ಣ ಸೇರಿದಂತೆ ಹಲವು ಮುಖಂಡರಿಗೆ ಆಂತರಿಕ ಸ್ವಾತಂತ್ರವಿಲ್ಲದಂತಾಗಿದೆ. ಈ ಬಗ್ಗೆ ಹಲವು ಬಾರಿ ಆಂತರಿಕವಾಗಿ ಪ್ರತಿಭಟಿಸಿ ತೀರಾ ಬೇಸತ್ತು ಪಕ್ಷದಲ್ಲಿದ್ದು ಸರಿಪಡಿಸಲು ಸಾದ್ಯವಿಲ್ಲ ಎಂದರಿತು ಬಿಜೆಪಿಯಿಂದ ದೂರವಾಗುತ್ತಿರುವುದಾಗಿ ತಿಳಿಸಿದ ಅವರು ಕಾಂಗ್ರೆಸ್ ಸೇರುವ ಆಲೋಚನೆಯಿದ್ದು ಮುಖಂಡರಿಂದ ಸೂಕ್ತ ಆಹ್ವಾನ ಬಂದಲ್ಲಿ ತೀರ್ಮಾನಿಸುವುದಾಗಿ ತಿಳಿಸಿದರು.

ಮುಖ್ಯಮಂತ್ರಿ ಹಾಗೂ ಸಂಸದರು ವಿವಿಧ ರೀತಿಯಲ್ಲಿ ಅಕ್ರಮವಾಗಿ ಹಣಗಳಿಸಿ ತಾಲೂಕಿನ ಜನತೆಗೆ ನೀಡಿ ವ್ಯವಸ್ಥೆ ಹಾಗೂ ನೈತಿಕತೆಯನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು. ಪಕ್ಷ ತೊರೆಯದಂತೆ ತೋರಿಸಿದ ಅಧಿಕಾರ, ಆಸೆ, ಆಮಿಷ ತಿರಸ್ಕರಿಸಿರುವುದಾಗಿ ತಿಳಿಸಿದರು.

ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರವು ವ್ಯಾಪಕವಾಗಿದ್ದು, ಭ್ರಷ್ಟಾಚಾರ ನಿರ್ಮೂಲನೆಗೆ ಜನರೊಂದಿಗೆ ಯಾವಾಗಲೂ ಸಿದ್ಧರಿರುವುದಾಗಿ ಹೇಳಿದರು. ಪಟ್ಟಣದ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ, ಭಾರತ ಸಂವಿಧಾನ ರಕ್ಷಣಾ ವೇದಿಕೆ ಮತ್ತಿತರರ ಹಲವು ಸಮಿತಿಯ ಕಾರ್ಯಕರ್ತರು, ಮುಖಂಡರು ಬೇಟಿ ಮಾಡಿ ತಾಲೂಕಿನಲ್ಲಿನ ಅನ್ಯಾಯ ಅಕ್ರಮದ ವಿರುದ್ದದ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳುವಂತೆ ಮಾಡಿದ ಮನವಿಗೆ ಸ್ಪಂದಿಸಿ ಅವರು ಮಾತನಾಡಿದರು.

ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿಯ ಅದ್ಯಕ್ಷ ಡಿ.ಎಸ್.ಈಶ್ವರಪ್ಪ ಮಾತನಾಡಿ, ತಾಲೂಕಿನಲ್ಲಿ ಬಿಜೆಪಿಯ ಬೆಳವಣಿಗೆಗಾಗಿ ಹೋರಾಡಿದ ಫಲವಾಗಿ ಹಲವರು ಇಂದಿಗೂ ಸಮಸ್ಯೆಯ ಸುಳಿಯಲ್ಲಿದ್ದಾರೆ. ಆದರೆ ದೂಷಿಸುತ್ತಿದ್ದವರು ಅಧಿಕಾರವನ್ನು ಅನುಭವಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ಪುರಸಭಾ ಉಪಾದ್ಯಕ್ಷ ನಾಗರಾಜಗೌಡ, ಸದಸ್ಯ ರೇವಣಸಿದ್ದಪ್ಪ, ಪಿ.ವೈ.ರವಿ, ಎಸ್.ಎಂ.ರಮೇಶ, ವಿಜಯಕುಮಾರ, ಭವಾನಿ ಗಬ್ಬೂರು ಮತ್ತಿತರರು ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+