ಬಿಜೆಪಿ ಸಂಕಷ್ಟಕ್ಕೆ ನಾಯಕರೇ ಕಾರಣ, ಗಡ್ಕರಿ
ಇಂದೋರ್,
ಫೆ. 18 : ಪಕ್ಷ ಎದುರಿಸುತ್ತಿರುವ ಸದ್ಯದ ಪರಿಸ್ಥಿತಿಗೆ ಬಿಜೆಪಿಯಿಂದ ಸಾಕಷ್ಟು ಪ್ರಯೋಜನ ಪಡೆದಿರುವ ಹಿಂದಿನ ನಾಯಕರು ಕಾರಣರೇ ಹೊರತು ಸಾಮಾನ್ಯ ಕಾರ್ಯಕರ್ತರಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ. id="toptextpromo">ಇಲ್ಲಿ
ಆರಂಭವಾಗಿರುವ ರಾಷ್ಟ್ರೀಯ ಕಾರ್ಯಕಾರಣಿಯ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿರಿಯ ನಾಯಕರು ತಮ್ಮ ಸ್ವಂತದ ರಾಜಕೀಯ ಜೀವನ, ಚಿಂತನೆ ಮುಖ್ಯವೋ ಅಥವಾ ಪಕ್ಷದ ಸಂಘಟನೆ ಮುಖ್ಯವೋ ಎಂಬ ಬಗ್ಗೆ ಚಿಂತನೆ ನಡೆಸಲಿ ಎಂದರು. ಸಂಕೋಚಿತದ ಮನೋಭಾವದ ವ್ಯಕ್ತಿಗಳು ಯಾರೂ ದೊಡ್ಡಮನುಷ್ಯರಾಗುವುದಿಲ್ಲ, ಅನೈತಿಕ ಮನೋಭಾವದಿಂದ ಯಾರೂ ಮೇಲ್ಮಟ್ಟಕ್ಕೆ ಏರಲಾರರು ಎಂಬ ಮಾಜಿ ಪ್ರಧಾನಿ ವಾಜಪೇಯಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಈ ಹೇಳಿಕೆಯು ಪಕ್ಷದ ನಾಯಕರ ಕಚ್ಚಾಟದ ವಿರುದ್ಧ ಎಚ್ಚರಿಕೆ ಸಂದೇಶ ನೀಡುತ್ತದೆ ಎಂದು ಹೇಳಿದರು. id='are-slot-1' class='oiad oi-axt oiadv'> id='top-searched-articles'>ಲೋಕಸಭೆ
ಚುನಾವಣೆಯಲ್ಲಿ ಸತತ 2ನೇ ಬಾರಿ ಸೋಲು ಅನುಭವಿಸಿದ ಪಕ್ಷದ ಪುನರುತ್ಥಾನದ ಅಗತ್ಯವಿದೆ. ಬಿಜೆಪಿ ಇತರೆ ಪಕ್ಷಗಳಿಂತ ಭಿನ್ನವಾಗೇನೂ ಉಳಿದಿಲ್ಲ. ಮುಂದಿನ ದಿನಗಳಲ್ಲಾದರೂ ಪಕ್ಷ ಕಟ್ಟುವ ಕೆಲಸ ಮಾಡಬೇಕಿದೆ ಎಂದು ಗಡ್ಕರಿ ಅಭಿಪ್ರಾಯಪಟ್ಟರು.











Click it and Unblock the Notifications