ನಾನು ದೊಡ್ಡ ಶ್ರೀಮಂತ, ಶಿವರಾಜ್ ಪಾಟೀಲ್

ತಮ್ಮ 70ನೇ ಹುಟ್ಟುಹಬ್ಬವನ್ನುದ ಸಂದರ್ಭದಲ್ಲಿ ಅವರ ಮಕ್ಕಳಾದ ಡಾ ಶರಣ್ ಪಾಟೀಲ್ ಮತ್ತು ಹಿರಿಯ ವಕೀಲ ಬಸವಪ್ರಭು ಪಾಟೀಲ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಪರಿಶ್ರಮ, ಪ್ರಾಮಾಣಿಕತೆ ಮತ್ತು ವಿನಯಶೀಲತೆ ಇದ್ದರೆ ಯಾರನ್ನೂ ಬೇಕಾದರೂ ಗೆಲ್ಲಬಹುದು. ಇದನ್ನು ಪರೀಕ್ಷೆದೆ ಒಳಪಡಿಸಿದಷ್ಟೂ ಸಾರ್ಥಕತೆ ಹೆಚ್ಚುತ್ತದೆ. ಮನುಷ್ಯ ಎಷ್ಟೇ ಎತ್ತರಕ್ಕೂ ಬೆಳೆದರೂ ಮಾನವೀಯ ಮೌಲ್ಯ ಬದಲಾಗಬಾರದು ಎಂದರು.
ಸುತ್ತೂರು ಮಠದ ವಿಧ್ಯಾರ್ಥಿಗಳ ಸೇವೆಗೆ ಬರುವಂತೆ ಆಹ್ವಾನಿಸಿದ್ದಾರೆ. ಇದನ್ನು ಒಪ್ಪಿಕೊಂಡಿದ್ದು, ನನ್ನ ಕೈಲಾದ ಸೇವೆ ಮಾಡುವೆ ಎಂದು ಪಾಟೀಲ್ ವಿವರಿಸಿದರು. ಶಿವರಾಜ್ ಪಾಟೀಲ್ ಅವರ ಜೀವನ ಚರಿತ್ರೆ ಡಿವೈನ್ ಗ್ರೇಸ್ ಪುಸ್ತಕವನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಬಿಡುಗಡೆ ಮಾಡಿದರು.












Click it and Unblock the Notifications