ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೃಪತುಂಗ ಬೆಟ್ಟದಲ್ಲಿ ಕನ್ನಡ ಚಿಂತನೆ - ಸಂಸ್ಕೃತಿ ಹಬ್ಬ

By Mahesh
|
Google Oneindia Kannada News

Singer Shashidhar Kote
ಹುಬ್ಬಳ್ಳಿ ,ಫೆ 12 : ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಫೆ. 14 ರಂದು ರವಿವಾರ ಸಂಜೆ 5 ಗಂಟೆಗೆ ನಗರದ ನೃಪತುಂಗ ಬೆಟ್ಟದಲ್ಲಿ " ಕನ್ನಡ ಚಿಂತನೆ - ಸಂಸ್ಕೃತಿ ಹಬ್ಬ " ವನ್ನು ಹಮ್ಮಿಕೊಂಡಿದ್ದು ನಾಡಿನ ಖ್ಯಾತ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಈ ಸುಂದರ ಪ್ರೇಕ್ಷಣಿಯ ತಾಣದಲ್ಲಿ ನಡೆಸಿಕೊಡಲಿದ್ದಾರೆ .

ಈ ಕಾರ್ಯಕ್ರಮಕ್ಕೆ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅವರು ಗೌರವಾನ್ವಿತ ಮುಖ್ಯ ಅತಿಥಿಗಳಗಿ ಆಗಮಿಸಲಿದ್ದು , ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಈ ಹಬ್ಬವನ್ನು ಉದ್ಘಾಟಿಸಲಿದ್ದಾರೆ . ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ವಹಿಸಲಿದ್ದಾರೆ.

ರಾಜ್ಯ ಗ್ರಾಮೀಣಾಭಿವೃಧ್ಧಿ ಸಚಿವರಾದ ಜಗದೀಶ ಶೆಟ್ಟರ್‍, ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಸಮಾರಂಭದಲ್ಲಿ ಜಿಲ್ಲೆಯ ಶಾಸಕರು , ಸಂಸದರು , ನಿಗಮ ಮಂಡಳಿಗಳ ಅಧ್ಯಕ್ಷರು ಉಪಸ್ಥಿತರಿರುತ್ತಾರೆ . ಜಿಲ್ಲಾ ಆಡಳಿತ , ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನೃಪತುಂಗ ಬೆಟ್ಟ ವಾಯುವಿಹಾರಿಗಳ ಸಂಘದ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದ ವಿವರಗಳು ಇಂತಿವೆ:

ಅಂದು ಸಂಜೆ 5 ಗಂಟೆಗೆ ಬಾಲಚಂದ್ರ ನಾಕೋಡ್ ಹಾಗೂ ಅವರ ತಂಡದಿಂದ ಗಾಯನ
5.30 ಗಂಟೆಗೆ ಉದ್ಘಾಟನಾ ಸಮಾರಂಭ ;
6.15 ಕ್ಕೆ ಶಶಿಧರ ಕೋಟೆ ಹಾಗೂ ತಂಡದವರ ಸುಗಮ ಸಂಗೀತ ;
7ಗಂಟೆಗೆ ಸಂಧ್ಯಾ ಕೇಶವರಾವ್ ಹಾಗೂ ತಂಡದವರಿಂದ ನೃತ್ಯ ವೈಭವ
ಸಂಜೆ 7.30 ರಿಂದ ಜರುಗುವ ಜನಪದ ವೈಭವದಲ್ಲಿ ಡೊಳ್ಳು ಕುಣಿತ , ಕಂಸಾಳೆ , ಪೂಜಾ ಕುಣಿತ , ತಮಟೆ , ಜಗ್ಗಲಿಗಿ , ಬ್ಯಾಡರವೇಗ ಹಾಗೂ ಜೋಗತಿ ನೃತ್ಯಗಳು ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X