ಛಾಪಾ ಕಾಗದ ಹಗರಣ: ರೇಹಾನ್ ಬೇಗ್ ಖುಲಾಸೆ!
ಬೆಂಗಳೂರು,
ಫೆ. 11 : ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಲಾಲ್ ತೆಲಗಿ ಸೇರಿ 20 ಮಂದಿ ನ್ಯಾಯಾಲಯ ಆರೋಪಿಗಳೆಂದು ಹಾಗೂ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ರೋಷನ್ ಬೇಗ್ ಅವರ ಸಹೋದರ ರೇಹಾನ್ ಬೇಗ್ ಸೇರಿ 9 ಮಂದಿಯನ್ನು ನಿರ್ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. id="toptextpromo">ಬೆಂಗಳೂರಿನ
ವಿಶೇಷ ನ್ಯಾಯಾಲಯದಲ್ಲಿ ಛಾಪಾ ಕಾಗದ ಹಗರಣದ ವಿಚಾರಣೆ ನಡೆಸಿದ ನ್ಯಾ.ಚಂದ್ರಶೇಖರ್ ನೇತೃತ್ವದ ನ್ಯಾಯಪೀಠವು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದು, ಇದರ ಪ್ರಮಾಣ ಇಂದು ಸಂಜೆ ಹೊರಬೀಳುವ ಸಾಧ್ಯತೆ ಇದೆ. ರೈಲ್ವೆ ನಿಲ್ದಾಣದಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಕರೀಲಾಲ್ ತೆಲಗಿ 1994ರಲ್ಲಿ ಛಾಪಾ ಕಾಗದ ಮಾರಾಟ ಪರವಾನಿಗೆ ಪಡೆದು ನಂತರ ನಾಸಿಕ್ ನಲ್ಲಿ ಮುದ್ರಣ ಆರಂಭಿಸಿದ. id='are-slot-1' class='oiad oi-axt oiadv'> id='top-searched-articles'>ರಾಜಕೀಯ
ಸಂಪರ್ಕ ಪಡೆದು ಛಾಪಾ ಕಾಗದಗಳನ್ನು ಮುದ್ರಿಸಿ ಸ್ಟಾಂಪ್ ವೆಂಡರ್ಸ್ ಗಳ ಮೂಲಕ ಮಾರಾಟ ಶುರುವಿಟ್ಟುಕೊಂಡ, ಈ ಅಕ್ರಮ ದಂಧೆಯಿಂದ ತೆಲಗಿ ಕೆಲವೇ ವರ್ಷಗಳಲ್ಲಿ ಕೋಟ್ಯಂತರ ಹಣ ಸಂಪಾದಿಸಿದ. ಅಂತಿಮವಾಗಿ 2001ರಲ್ಲಿ ಬಂಧಿತನಾದ ತೆಲಗಿ ಕಳೆದ ಒಂದು ದಶಕದಿಂದ ಜೈಲಿನಲ್ಲಿದ್ದಾನೆ.











Click it and Unblock the Notifications