ಛಾಪಾ ಕಾಗದ ಹಗರಣ: ರೇಹಾನ್ ಬೇಗ್ ಖುಲಾಸೆ!

ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಛಾಪಾ ಕಾಗದ ಹಗರಣದ ವಿಚಾರಣೆ ನಡೆಸಿದ ನ್ಯಾ.ಚಂದ್ರಶೇಖರ್ ನೇತೃತ್ವದ ನ್ಯಾಯಪೀಠವು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದು, ಇದರ ಪ್ರಮಾಣ ಇಂದು ಸಂಜೆ ಹೊರಬೀಳುವ ಸಾಧ್ಯತೆ ಇದೆ. ರೈಲ್ವೆ ನಿಲ್ದಾಣದಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಕರೀಲಾಲ್ ತೆಲಗಿ 1994ರಲ್ಲಿ ಛಾಪಾ ಕಾಗದ ಮಾರಾಟ ಪರವಾನಿಗೆ ಪಡೆದು ನಂತರ ನಾಸಿಕ್ ನಲ್ಲಿ ಮುದ್ರಣ ಆರಂಭಿಸಿದ.
ರಾಜಕೀಯ ಸಂಪರ್ಕ ಪಡೆದು ಛಾಪಾ ಕಾಗದಗಳನ್ನು ಮುದ್ರಿಸಿ ಸ್ಟಾಂಪ್ ವೆಂಡರ್ಸ್ ಗಳ ಮೂಲಕ ಮಾರಾಟ ಶುರುವಿಟ್ಟುಕೊಂಡ, ಈ ಅಕ್ರಮ ದಂಧೆಯಿಂದ ತೆಲಗಿ ಕೆಲವೇ ವರ್ಷಗಳಲ್ಲಿ ಕೋಟ್ಯಂತರ ಹಣ ಸಂಪಾದಿಸಿದ. ಅಂತಿಮವಾಗಿ 2001ರಲ್ಲಿ ಬಂಧಿತನಾದ ತೆಲಗಿ ಕಳೆದ ಒಂದು ದಶಕದಿಂದ ಜೈಲಿನಲ್ಲಿದ್ದಾನೆ.












Click it and Unblock the Notifications