ಭೈರಪ್ಪ, ಸವದತ್ತಿಗೆ ಡಾಕ್ಟರೇಟ್ ಗೌರವ

ಗೌರವ ಡಾಕ್ಟರೇಟ್ ಪಡೆದ ನಂತರ ಮಾತನಾಡಿದ ಎಸ್ ಎಲ್ ಭೈರಪ್ಪ, ಈ ವಿಶ್ವವಿದ್ಯಾಲಯ ಸಾಂಸ್ಕೃತಿಕವಾಗಿ ಮಹತ್ವದ ಪಡೆದ ವಿಶ್ವವಿದ್ಯಾಲಯ. ಇಲ್ಲಿಂದ ನನಗೆ ಈ ಗೌರವ ಸಿಕ್ಕಿದ್ದು ಖುಷಿ ತಂದಿದೆ ಎಂದರು. ಈ ಕ್ಷಣ ಅವಿಸ್ಮರಣೀಯ. ಈ ವಿಶ್ವವಿದ್ಯಾಲಯದ ಹುಟ್ಟಿನೊಂದಿಗೆ ಪದವಿ ಪಡೆದೆ. 1953ರಲ್ಲಿ ಬಿಎಸ್ಸಿ, 1955ರಲ್ಲಿ ಎಂಎಸ್ಸಿ ಹಾಗೂ 1961 ರಲ್ಲಿ ಪಿಎಚ್ ಡಿ ಪಡೆದುಕೊಂಡು ಇದೇ ವಿವಿಯಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದೇನೆ. ಈ ಗೌರವ ಒಂದು ರೀತಿಯಲ್ಲಿ ತವರು ಮನೆ ಕಾಣಿಕೆ. ವಿಶ್ವವಿದ್ಯಾಲಯದ ಗೌರವಕ್ಕೆ ನಾನು ಋಣಿ ಎಂದು ಡಾ ಐ ಎಂ ಸವದತ್ತಿ ಹೇಳಿದರು.
ಕರ್ನಾಟಕ ವಿವಿ ನನಗೆ ಈ ಗೌರವ ನೀಡಿದ್ದು ನನ್ನ ಸಂಪತ್ತಿಗೆ ಹಾಗೂ ಜನಪ್ರಿಯತೆಗೆ ಅಲ್ಲ. ಬಡಜನರಿಗೆ ಗುಣಮಟ್ಟದ ಸೇವೆ ನೀಡಿರುವ ಕಾರಣ. ಯಾವತ್ತೂ ಈ ವಿಶ್ವವಿದ್ಯಾಲಯಕ್ಕೆ ನಾನು ಋಣಿ ಎಂದು ನೇತ್ರ ಎಂ ಎಂ ಜೋಶಿ ಹೇಳಿದರು.












Click it and Unblock the Notifications