ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಂಇಎಸ್ ವೇಷ ಧರಿಸಿ ಕರವೇ ಹೋರಾಟ!
ಮರಾಠಿ ಧ್ವಜ ಹಾರಿಸುವುದು. ಕನ್ನಡಿಗರು ಪಾಕ್ ಸೈನಿಕರಿಗಿಂತ ಕ್ರೂರರು ಎನ್ನುವುದು. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಪದೇ ಪದೇ ವಿವಿಧ ಹೇಳಿಕೆ ನೀಡಿ ಜನರ ಭಾವನೆಗಳನ್ನು ಕೆರಳಿಸುವುದು ಇವೇ ಮುಂತಾದ ದುಷ್ಕೃತ್ಯಗಳಲ್ಲಿ ಎಂಇಎಸ್ ತೊಡಗಿದೆ. ಇದನ್ನು ಕರವೇ ಪ್ರತಿಭಟಿಸುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಮ್ಮ ವಿರೋಧವಿಲ್ಲ .ಆದರೆ, ನಮ್ಮ ನೆಲಕ್ಕೆ ಬಂದು ನಮ್ಮವರ ಕೈ ಕತ್ತರಿಸುವುದಾಗಿ ಭಾಷಣ ಮಾಡಿದರೆ ಸಹಿಸಿಕೊಂಡು ಇರಲು ಸಾಧ್ಯವಿಲ್ಲ ಎಂದರು.
ಒಟ್ಟು 400 ಕ್ಕೂ ಅಧಿಕ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಪರಿಸ್ಥಿತಿ ಹತೋಟಿಯಲ್ಲಿದೆ. ಕರವೇ ಕಾರ್ಯಕರ್ತರು ಎಂಇಎಸ್ ಸೀಮಾ ಪರಿಷತ್ ಸದಸ್ಯರ ವೇಷ ಧರಿಸಿ ಬಂದು, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಡ್ಡಿ ಮಾಡಿದರು. ನಂತರ ಪ್ರತಿಭಟನಾಕಾರರನ್ನು ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.
Comments
bjp ಬಿಜೆಪಿ ಬೆಳಗಾವಿ ಕರವೇ ಪ್ರತಿಭಟನೆ kannada ಕನ್ನಡ maharashtra ಎಂಇಎಸ್ mes karave marathi ಮಹಾರಾಷ್ಟ್ರ ಮರಾಠಿ ಪೊಲೀಸ್ ನಾರಾಯಣ ಗೌಡ narayana gowda
Story first published: Friday, February 5, 2010, 12:39 [IST]