ತಿರುಮಕೂಡಲಿನಲ್ಲಿ ಪೂರ್ಣ ಕುಂಭ ಮೇಳ

ಕಾವೇರಿ, ಕಪಿಲಾ ಮತ್ತು ಸ್ಫಟಿಕಾ ಸರೋವರಗಳ ತ್ರಿವೇಣಿ ಸಂಗಮದಲ್ಲಿ ಜನರು ಪುಣ್ಯಸ್ನಾನ ಮಾಡುವುದು ಪದ್ಧತಿ. ಈ ಬಾರಿಯ ಕುಂಭಮೇಳಕ್ಕೆ 'ಆಯುರ್ಯೋಗ ' ಲಭಿಸಿರುವುದು ಪುಣ್ಯಸ್ನಾನಕ್ಕೆ ಅತ್ಯಂತ ಪ್ರಶಸ್ತ ಎನ್ನಲಾಗಿದೆ. ಈ ಮಹೋದಯ ಪುಣ್ಯಸ್ನಾನಕ್ಕೆ ಜನವರಿ 30ರಂದು ಮೀನಾ ಲಗ್ನ ಬೆಳಿಗ್ಗೆ 9 .25 ರಿಂದ 11.05 ಮತ್ತು ಮಧ್ಯಾಹ್ನ 12.25 ರಿಂದ 1 .13ರ ಸಮಯದಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ ಎನ್ನುವುದು ನಂಬಿಕೆ.
ಗುಂಜಾನರಸಿಂಹ ಸ್ವಾಮಿ, ಅಗಸ್ತ್ಯೇಶ್ವರಸ್ವಾ ಮಿ, ಚೌಡೇಶ್ವರಿ ದೇವಾಲಯ, ಭಾರದ್ವಾಜ ಋಷ್ಯಾಶ್ರಮ, ಬಸವ ರುದ್ರಪಾದ ದರ್ಶನ ಪಡೆದು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಅವಕಾಶ ಕಲ್ಪಿಸಲಾಗಿದೆಯೆಂದು ಜಿಲ್ಲಾ ವಿಶೇಷಾಧಿಕಾರಿ ಭಾರತಿ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ. ಕುಂಭ ಮೇಳಕ್ಕೆ ಆರು ಲಕ್ಷ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ.












Click it and Unblock the Notifications