ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲಡ್ ಬ್ಯಾಂಕ್ ಗಾಗಿ ನಿರಂತರ'ಲಂಚಾವತಾರ '

By Mahesh
|
Google Oneindia Kannada News

Master Hiranaiah
ಬೆಂಗಳೂರು, ಜ.19: ನಗರದಲ್ಲಿ ನೀರಿನಷ್ಟೇ ಜನಕ್ಕೆ ರಕ್ತದ ಕೊರತೆ ಎದ್ದು ಕಾಣುತ್ತಿದೆ. ಇರುವ ಬ್ಲಡ್ ಬ್ಯಾಂಕ್ ಗಳಲ್ಲಿ ಹೆಚ್ಚು ಶೇಖರಣೆ ಕಂಡು ಬಂದಿಲ್ಲ. ಹಾಗಾಗಿ ಸುತ್ತಮುತ್ತಲಿನ ಪ್ರದೇಶದ ಜನರ ಅನುಕೂಲಕ್ಕಾಗಿ ಬ್ಲಡ್ ಬ್ಯಾಂಕ್ ಸ್ಥಾಪಿಸಲು ನರಸಿಂಹರಾಜ ಕಾಲೋನಿ(ಎನ್ ಆರ್ ಕಾಲೋನಿ) ನಿರಂತರ ಸೇವಾ ಸಂಸ್ಥೆ ಮುಂದಾಗಿದೆ. ಇದಕ್ಕೆ ಬೇಕಾಗುವ ಹಣವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರ 'ಲಂಚಾವತಾರ' ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ನಮ್ಮ ಬಡಾವಣೆಯ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆಪತ್ಕಾಲದಲ್ಲಿ ರಕ್ತ ಒದಗಿಸುವುದು ಬಹಳ ಕಷ್ಟವಾಗಿರುತ್ತದೆ. ಇದಕ್ಕಾಗಿ ನಿರಂತರ ಬ್ಲಡ್ ಬ್ಯಾಂಕ್ ಪ್ರಾರಂಭಿಸಲಾಗುತ್ತಿದೆ. ರಕ್ತವನ್ನು ಶೇಖರಿಸಿ, ಅಗತ್ಯ ಸಮಯದಲ್ಲಿ ಪೂರೈಸಲು ಅತ್ಯಾಧುನಿಕ ರೆಫ್ರಿಜರೇಟರ್ ಅಗತ್ಯವಿದೆ. ಇದಕ್ಕೆ ಸಾಕಷ್ಟು ವೆಚ್ಚವಾಗಲಿದ್ದು, ಇದನ್ನು ಭರಿಸಲು 'ಲಂಚಾವತಾರ' ಸಾಮಾಜಿಕ ನಾಟಕದ ಸಹಾಯಾರ್ಥ ಪ್ರದರ್ಶನವನ್ನು ಹಮ್ಮಿಕೊಂಡಿದ್ದೇವೆ ಎನ್ನುತ್ತಾರೆ ನಿರಂತರ ಸೇವಾ ಸಂಸ್ಥೆಯ ಅಧ್ಯಕ್ಷ ಬಿ ಆರ್ ಮುರಳಿ.

ನಾಗರೀಕರು ಟೀಕೆಟ್ ಖರೀದಿಸಿ, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲಕರವಾದ ಬ್ಲಡ್ ಬ್ಯಾಂಕ್ ಗೆ ಚಾಲನೆ ನೀಡಬೇಕೆಂದು ನಿರಂತರ ಸಂಸ್ಥೆ ಕೇಳಿಕೊಂಡಿದೆ. ದಿನ 24 ಗಂಟೆಯೂ ಎಲ್ಲಾ ವರ್ಗದ ನಾಗರೀಕರಿಗೆ ರಕ್ತವನ್ನು ಉಚಿತವಾಗಿ ದೊರಕಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

ಹೆಚ್ಚಿನ ವಿವರಗಳು:
ನಾಟಕ ಪ್ರದರ್ಶನ ದಿನಾಂಕ: 30 ಜನವರಿ 2010 ( ಶನಿವಾರ)
ಸ್ಥಳ: ಗಾಯನ ಸಮಾಜ, ಕೆ.ಆರ್ ರಸ್ತೆ.
ಸಮಯ: ಸಂಜೆ 7 ಗಂಟೆ

ಟಿಕೆಟ್ ದೊರೆಯುವ ಸ್ಥಳ:
ರವಿ ಮೆಡಿಕಲ್ಸ್, ಎನ್ ಆರ್ ಕಾಲೋನಿ
ಕಿರಣ್ ಕಾಫಿ ವರ್ಕ್ಸ್, ಎನ್ ಆರ್ ಕಾಲೋನಿ

ಟಿಕೆಟ್ ದರ:
ರು. 50,100,150, 250

ಸಂಪರ್ಕಿಸಿ: ಬಿ.ಆರ್. ಮುರಳಿ (ಮೊ: 99000 04005 )
ಅಧ್ಯಕ್ಷರು, ನಿರಂತರ ಸೇವಾ ಸಂಸ್ಥೆ, ಎನ್ ಆರ್ ಕಾಲೋನಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X