ಗಣರಾಜ್ಯೋತ್ಸವ ಪರೇಡಿಗೆ ಸಾಗರದ ಡೊಳ್ಳುತಂಡ

ಈ ಸ್ಥಬ್ದ ಚಿತ್ರಕ್ಕೆ ಇನ್ನಷ್ಟು ಮೆರಗನ್ನು ಕಲ್ಪಿಸಿಕೊಡಲು ಸಾಗರ ತಾಲ್ಲೂಕಿನ ಕಣ್ಣೂರು ಗ್ರಾಮದ ಕಣ್ಣೇಶ್ವರ ಜಾನಪದ ಕಲಾ ಸಂಘದ ಕಲಾವಿದರು ಡೊಳ್ಳು ಪ್ರದರ್ಶನ ನೀಡಲು ಆಯ್ಕೆಯಾಗಿದ್ದಾರೆ. ಕಣ್ಣೂರು ಗ್ರಾಮದ 14 ಕಲಾವಿದರು ಗೌತಮಪುರ ಗ್ರಾಮದ ಬೆಳ್ಳಿಯಪ್ಪ ತಂಡದ 11 ಕಲಾವಿದರು ಸೇರಿದಂತೆ ಒಟ್ಟು 25 ಜನ ಕಲಾವಿದರ ತಂಡ ಬಿ.ಟಾಕಪ್ಪ ಕಣ್ಣೂರು ಅವರ ನೇತ್ರತ್ವದಲ್ಲಿ ದೆಹಲಿಗೆ ತೆರಳಿ ಪ್ರದರ್ಶನ ನೀಡಲು ಸಜ್ಜಾಗಿದೆ.
ತಂಡದಲ್ಲಿನ ಬಹುತೇಕ ಕಲಾವಿದರು ಈಗಾಗಲೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅಲ್ಲದೆ, ರಷ್ಯಾ, ಅಮೇರಿಕ, ಇಂಗ್ಲೆಂಡ್, ದುಬೈ ಮುಂತಾದ ಹೊರ ರಾಷ್ಟ್ರಗಳಲ್ಲಿ ಪ್ರದರ್ಶನ ನೀಡಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ ಎಂದು ತಂಡದ ಮುಖಂಡ ಟಾಕಪ್ಪ ತಿಳಿಸಿದ್ದಾರೆ.












Click it and Unblock the Notifications