ಬಿಜೆಪಿ ಭಿನ್ನಮತದಲ್ಲಿ ಮಠಾಧೀಶರ ಕೈವಾಡ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಠಾಧೀಶರ ಕುಮ್ಮಕ್ಕಿನಿಂದಲೇ ಶಾಸಕರೊಬ್ಬರು ಇತ್ತೀಚೆಗೆ ಸಚಿವರಾಗಿದ್ದಾರೆಂದು ಪರೋಕ್ಷವಾಗಿ ರೇಣುಕಾಚಾರ್ಯ ಅವರನ್ನು ಟೀಕಿಸಿದರು. ಮಠಾಧೀಶರಿಗೆ ರಾಜಕೀಯ ಒಳಮರ್ಮ ಅರ್ಥವಾಗುವುದಿಲ್ಲ. ಕಾರಣ ಮಠಾಧೀಶರು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡದೆ, ರಾಜ್ಯದ ಒಳಿತಿಗಾಗಿ ಉತ್ತಮ ಮಾರ್ಗದರ್ಶನ ನೀಡುವ ಜೊತೆಗೆ ಭಿನ್ನಮತವನ್ನು ಶಮನಗೊಳಿಸಲು ಪ್ರಯತ್ನಿಸಬೇಕೆಂದು ಮಠಾಧೀಶರಲ್ಲಿ ಮನವಿ ಮಾಡಿಕೊಳ್ಳುವುದಾಗಿ ಲಕ್ಷ್ಮಿನಾರಾಯಣ ಹೇಳಿದರು.
ತಾನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿದ್ದು, ಕಳೆದ 30 ವರ್ಷಗಳಿಂದ ಜನಸಂಘದೊಂದಿಗೆ ಸಂಪರ್ಕವಿಟ್ಟುಕೊಂಡು ಬಿಜೆಪಿ ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಸೇವೆಯನ್ನು ಗುರುತಿಸಿ ನನಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಲಕ್ಷ್ಮಿನಾರಾಯಣ ಬಿಜೆಪಿ ಹೈಕಮಾಂಡ್ ನ್ನು ಒತ್ತಾಯಿಸಿದರು.












Click it and Unblock the Notifications