ಕಾಂಗ್ರೆಸ್ ಜೆಡಿಎಸ್ ವಿಚಿತ್ರ ನೆಂಟಸ್ತನ
ಈ ಸಂದರ್ಭದಲ್ಲಿ ಬಾಲಕೃಷ್ಣರವರನ್ನು ಸಂಬೋಧಿಸಿ ನೀವು ರಾಜಕೀಯವಾಗಿ ಅಂತ್ಯವಾಗುತ್ತೀರ ಎಂದು ಕಾಂಗ್ರೆಸ್ನ ಎಸ್.ರವಿ ಹೇಳಿದರು. ಮಾರುತ್ತರ ಬೀಸಿದ ಶಾಸಕ ಹೆಚ್.ಸಿ.ಬಾಲಕೃಷ್ಣ, ಯಾರಿಂದಲೂ ರಾಜಕೀಯವಾಗಿ ಅಂತ್ಯಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ತಿರುಗೇಟು ನೀಡಿದರು. ಇದೇ ವೇಳೆ, ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿಯವರ ನಡವಳಿಕೆಯ ವಿರುದ್ದ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ತಳ್ಳಾಟ ನೂಕಾಟ ಆರಂಭವಾದ್ದರಿಂದ ಕೆಲಕಾಲ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೋಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಸೋಲಿನ ಭೀತಿಯಿಂದ ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿಯವರು ಹತಾಶೆಯಿಂದ ನಡೆದುಕೊಳ್ಳುತ್ತಿದ್ದಾರೆ. ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ರವಿ ಮತ್ತು ಪಟಾಲಂ ನಡೆಸಿದ ಗೂಂಡಾವರ್ತನೆಯನ್ನ ದಬ್ಬಾಳಿಕೆಯ ದರ್ಬಾರನ್ನ ಮಾಗಡಿಯಲ್ಲಿ ನಡೆಸಲು ಬಂದಿದ್ದಾರೆ. ಅವರ ಗೂಂಡಾವರ್ತನೆಯಿಂದ ಬೇಸತ್ತಿರುವ ಕನಕಪುರ ಕ್ಷೇತ್ರದ ಮತದಾರರೆ ಈ ಬಾರಿ ತಕ್ಕಪಾಠ ಕಲಿಸಲಿದ್ದಾರೆಂದು ಶಾಸಕ ಹೆಚ್.ಸಿ.ಬಾಲಕೃಷ್ಣ ದೋಸ್ತಿ ಪಕ್ಷದ ಅಭ್ಯರ್ಥಿ ರವಿಯವರ ಮೇಲೆ ಹರಿಹಾಯ್ದರು.