ಗಣಿಗಾರಿಕೆ ಮುಂದುವರಿಯಲಿದೆ, ಜನಾರ್ದನ ರೆಡ್ಡಿ

ಗಣಿಗಾರಿಕೆ ವಿಷಯ ಸದ್ಯ ಸುಪ್ರೀಂಕೋರ್ಟ್ ನಲ್ಲಿರುವುದರಿಂದ ಈ ಬಗ್ಗೆ ಹೆಚ್ಚಿಗೆ ಮಾತಾಡುವುದಿಲ್ಲ. ನಮ್ಮ ಕಂಪನಿ ಕೂಡ ಕಾನೂನು ಸಮರ ಆರಂಭಿಸಿದೆ. ಕಂಪನಿಯನ್ನು ಉಳಿಸಿಕೊಳ್ಳಲು ನಾವು ಸಜ್ಜಾಗಿದ್ದೇವೆ. ಉನ್ನತ ನ್ಯಾಯಾಲಯ ನೇಮಿಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿ ಸದಸ್ಯರು ಗಣಿಗಾರಿಕೆ ನಡೆಸುತ್ತಿರುವ ಸ್ಥಳಕ್ಕೆ ಇದುವರೆಗೆ ಭೇಟಿ ನೀಡಿಲ್ಲ. ಈ ಸಮಿತಿ ಯಾವ ಆಧಾರದ ಮೇಲೆ ವರದಿ ನೀಡಿದೆಯೆಂದು ತಿಳಿಯುತ್ತಿಲ್ಲ ಎಂದು ಸಚಿವ ಜನಾರ್ದನರೆಡ್ಡಿ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications