ಸಿಎಂ ಉದಾಸಿ ಸ್ಪೀಕರ್ ಆಗುವ ಸಾಧ್ಯತೆ ?

Udasi likely to appiont Speaker
ಬೆಂಗಳೂರು, ನ. 13 : ಜಗದೀಶ್ ಶೆಟ್ಟರ್ ಅವರಿಂದ ತೆರವಾಗುತ್ತಿರುವ ಸ್ಪೀಕರ್ ಸ್ಥಾನಕ್ಕೆ ಯಾರನ್ನು ನೇಮಿಸಬೇಕು ಎಂಬ ಕಸರತ್ತು ತೀವ್ರಗೊಂಡಿದ್ದು, ಮುಖ್ಯವಾಗಿ ಸಚಿವರಾದ ಸಿಎಂ ಉದಾಸಿ, ಸುರೇಶಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಉಪಸಭಾಪತಿ ಕೆ ಜಿ ಭೂಪಯ್ಯ ಅವರ ಹೆಸರುಗಳು ಬಲವಾಗಿ ಕೇಳಿಬರುತ್ತಿವೆ.

ಉದಾಸಿ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ರೆಡ್ಡಿ ಬಣ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಅವರ ರಾಜೀನಾಮೆ ಪಡೆದು ಸಭಾಧ್ಯಕ್ಷ ಸ್ಥಾನಕ್ಕೆ ಅವರನ್ನೇ ನೇಮಕ ಮಾಡುವ ಸಂಭವ ಹೆಚ್ಚಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಉಪಸಭಾಪತಿ ಕೆ ಜಿ ಭೂಪಯ್ಯ ಅವರನ್ನೇ ಸಭಾಪತಿಯಾಗಿ ಏಕೆ ಮುಂದುವರಿಸಬಾರದು ಎಂಬ ಮಾತೂ ಇದೆ. ಜೊತೆಗೆ ಸುರೇಶಕುಮಾರ್, ಕಾಗೇರಿ ಅವರ ಹೆಸರುಗಳು ಇವೆ ಎನ್ನಲಾಗಿದೆ.

ಉದಾಸಿ ಅವರೆ ಸಭಾಪತಿಯಾಗಲಿದ್ದಾರೆ ಕಾರಣ ಅವರ ಮಗ ಶಿವಕುಮಾರ್ ಉದಾಸಿ ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಪಕ್ಷದ ಟಿಕೆಟ್ ನೀಡಿದರೆ ಸ್ಪೀಕರ್ ಹುದ್ದೆ ಅಲಂಕರಿಸುವೆ ಎಂದು ಭರವಸೆ ನೀಡಿದ್ದರು ಎನ್ನಲಾಗಿದೆ. ಶಿವಕುಮಾರ್ ಉದಾಸಿ ಇದೀಗ ಹಾವೇರಿ ಕ್ಷೇತ್ರದ ಸಂಸದರಾಗಿದ್ದಾರೆ. ನವೆಂಬರ್ 17 ರಂದು ಶೆಟ್ಟರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+