ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿಗಳಿಗೆ ಪಾಠ ಕಲಿಸುತ್ತೇವೆ, ಕರವೇ

|
Google Oneindia Kannada News

Narayanagowda
ಬೆಂಗಳೂರು, ನ. 13 : ಕಾಳಿಂಗ ಸರ್ಪಗಳ೦ತಿರುವ ರೆಡ್ಡಿ ಸಹೋದರರರನ್ನು ಸಾಕಿಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೆ. ಸರ್ಪಗಳನ್ನು ನಿಯಂತ್ರಿಸುವ ಪುಂಗಿ ನನ್ನ ಬಳಿ ಇದೆ ಎಂದು ಹೇಳಿದರು. ಈಗ ಆ ಸರ್ಪಗಳು ಕೆರಳಿ ನಿಂತಿವೆ. ಆದರೆ, ಮುಖ್ಯಮಂತ್ರಿಗಳ ಪುಂಗಿ ಕೆಲಸ ಮಾಡುತ್ತಿಲ್ಲ, ರೆಡ್ಡಿಗಳನ್ನು ಹಾದಿ ಬೀದಿಯಲ್ಲಿ ವಿಚಾರಿಸಿಕೊಳ್ಳುವ ಕಾಲ ಬಂದಿದೆ ಇವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಹೇಳಿಕೆ ನೀಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ನಮ್ಮ ನೋವಿಗೆ ಸರಕಾರ ಸ್ಪಂದಿಸುತ್ತದೆ ಎಂದು ನೆರೆ ಸಂತ್ರಸ್ತರು ಕನಸು ಕಂಡಿದ್ದರು, ಇದಕ್ಕೆ ಪೂರಕವಾಗಿ ಸಾಕಷ್ಟು ಆರ್ಥಿಕ ನೆರವು ಕೂಡ ದೊರೆಯಿತು. ಆದರೆ, ಬಿಜೆಪಿಯ ಆಂತರಿಕ ಕಚ್ಚಾಟದಲ್ಲಿ ಸಂತ್ರಸ್ತರ ಕನಸು ನುಚ್ಚುನೂರಾಗಿದೆ. ಕರ್ನಾಟಕದ ಅಧಿಕಾರವನ್ನು ಯಾವ ಕಾರಣಕ್ಕೂ ರೆಡ್ಡಿಗಳ ಪಾಲಾಗುವುದಕ್ಕೆ ಬಿಡುವುದಿಲ್ಲ ಎಂದು ನಾರಾಯಣ ಗೌಡ ಹೇಳಿಕೆ ನೀಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X