ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಖನಿಜ ಸಂಪತ್ತು ಲೂಟಿ: ಯಡಿಯೂರಪ್ಪ
ಅರಣ್ಯ ಭವನದಲ್ಲಿ ನಡೆದ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ, ಅರಣ್ಯ ಮತ್ತು ಖನಿಜ ಸಂಪತ್ತು ಕೆಲವರ ಕಪಿಮುಷ್ಠಿಯಲ್ಲಿ ಸಿಕ್ಕಿ ಲೂಟಿಯಾಗುತ್ತಿದೆ. ದೇಶ ಸಂಕಟದ ಪರಿಸ್ಥಿತಿಯಲ್ಲಿದೆ. ದೇಶವನ್ನು ಮುನ್ನೆಡೆಸಲು ಆಡಳಿತಕ್ಕೆ ಮತ್ತಷ್ಟು ಶಕ್ತಿ ಬರಬೇಕಾಗಿದೆ. ನಾಡಿನ ಜನತೆ ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಹೋಗಲು ಸಹ ನಮ್ಮಿಂದ ಆಗುತ್ತಿಲ್ಲ ಎಂದು ಹೇಳಿದರು.
ಚುನಾಯಿತ ಪ್ರತಿನಿಧಿಗಳ ಮೇಲೆ ಜನರಿಗೆ ವಿಶ್ವಾಸ, ನಂಬಿಕೆ ಕಡಿಮೆಯಾಗುತ್ತಿದೆ. ನಾವು ಜನರಿಂದ ಗೆದ್ದಿದ್ದೇವೆ ಎನ್ನುವುದನ್ನು ಕೆಲವರು ಮರೆತು ವರ್ತಿಸುತ್ತಿರುವುದು ದುರದೃಷ್ಟಕರ ಎಂದು ಯಾರ ಹೆಸರನ್ನೂ ಹೇಳದೆ ಮಾತನಾಡಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, November 11, 2009, 10:27 [IST]