ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರಾಠಿಗರ ಭಾವನೆಗಳನ್ನು ಕೆದಕಬೇಡಿ, ಭಾಳಾ

|
Google Oneindia Kannada News

Bal Thackeray
ಮುಂಬೈ, ನ. 11 : ಮರಾಠಿಗರ ಭಾವನೆ ಕೆದಕುವ ಅಬು ಅಜ್ಮಿಯಂತಹ ಶಾಸಕರು ನಮ್ಮ ಪಕ್ಷದ ಕಾರ್ಯಕರ್ತರ ಕೈಯಲ್ಲಿ ಸಿಕ್ಕಿದ್ದರೆ ಅವರ ಚರ್ಮ ಸುಲಿದು ತಂದೂರಿ ಮಾಡುತ್ತಿದ್ದರು. ನಮ್ಮ ಪಕ್ಷದ ಹಿರಿಯ ಸದಸ್ಯ ದಿವಾಕರ್ ರಾವೊತ್ ಕೈಯಲ್ಲಿ ಸಿಕ್ಕಿದ್ದರೆ ಅವರ ಕಥೆಯೇ ಬೇರೆಯಾಗುತ್ತಿತ್ತು ಎಂದು ಶಿವಸೇನೆ ಮುಖ್ಯಸ್ಥ ಬಾಳಠಾಕ್ರೆ ಗರ್ಜಿಸಿದ್ದಾರೆ.

ಹಿಂದಿ ಮತ್ತು ಇಂಗ್ಲಿಷ್ ವಿರುದ್ದ ಶಿವಸೇನೆ ಸದಸ್ಯರು ಈ ಹಿಂದೆಯೂ ಸದನದಲ್ಲಿ ಹೋರಾಟ ನಡೆಸಿದ್ದಾರೆ. ಆದರೆ ವಿಧಾನಸಭೆಯಲ್ಲಿ ಹಲ್ಲೆಗೆ ಮುಂದಾದ ಎಂಎನ್ಎಸ್ ಶಾಸಕರ ಕ್ರಮ ಸರಿಯಲ್ಲ. ವಿಧಾನಸಭೆ ಅಥವಾ ಸಂಸತ್ತಿನ ಕಲಾಪಗಳು ಶಿಷ್ಟಾಚಾರದ ಪ್ರಕಾರವೇ ನಡೆಯಬೇಕು ಅದು ರಣರಂಗವಾಗಬಾರದು ಎಂದು ಪಕ್ಷದ ಮುಖವಾಣಿ 'ಸಾಮ್ನಾ' ದ ಸಂಪಾದಕೀಯದಲ್ಲಿ ಠಾಕ್ರೆ ಹೇಳಿದ್ದಾರೆ.

ಠಾಕ್ರೆ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ, ಬಾಳಾಠಾಕ್ರೆ ಜೀವನದ ಕೊನೆಯ ಹಂತ ತಲುಪಿದ್ದು, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಇತ್ತೀಚಿನ ಚುನಾವಣೆಯಲ್ಲಿನ ಸೋಲು ಅವರನ್ನು ಕಂಗೆಡಿಸಿದ್ದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆಂದು ಕಿಡಿಕಾರಿದ್ದಾರೆ. ಅಬು ಅಜ್ಮಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿ ವಿವಾದಕ್ಕೊಳಗಾಗಿದ್ದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X