ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ಎಂಇಎಸ್
ನಗರದ ಹೊರವಲಯದ ಮಣ್ಣೂರು ಎಂಬಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಲ್ಲಿದ್ದ ಕನ್ನಡ ಬಾವುಟ ಹಾರಿಸಿದ್ದಕ್ಕೆ ಎಂಇಎಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರಲ್ಲದೆ, ಬಸ್ ನಲ್ಲಿ ಬರೆದಿದ್ದ ಕನ್ನಡ ಘೋಷಣೆಗಳನ್ನು ಅಳಿಸಿ 'ಜೈ ಮಹಾರಾಷ್ಟ್ರ' ಎಂದು ಘೋಷಣೆ ಬರೆದರು. ಘಟನೆಯನ್ನು ಪ್ರತಿಭಟಿಸಿದ ವಿದ್ಯಾರ್ಥಿಗಳು ಪೋಲಿಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ದೂರು ಸ್ವಿಕರಿಸಲು ಹಿಂದೇಟು ಹಾಕಿದರು ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಕಾರವಾರದಲ್ಲೂ ಇಂತಹ ಘಟನೆ ವರದಿಯಾಗಿದೆ. ಮರಾಠಿ ಶಾಲೆಯೊಂದರಲ್ಲಿದ್ದ ಹತ್ತಾರು ಮಂದಿ ಮರಾಠಿಗರು ಕನ್ನಡ ವಿರೋಧಿ ಘೋಷಣೆ ಕೂಗಿದರು. ವಿಷಯ ತಿಳಿದ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದಾಗ ಕನ್ನಡ ವಿರೋಧಿಗಳು ಕಾಲ್ಕಿತ್ತರು. ಈ ನಡುವೆ ಭಾನುವಾರ ಎಂಇಎಸ್ ಕರೆ ನೀಡಿದ್ದ 'ಬೆಳಗಾವಿ ಬಂದ್' ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
(ದಟ್ಸ್ ಕನ್ನಡ ವಾರ್ತೆ)
Comments
ಕಾರವಾರ karwar ಬೆಳಗಾವಿ kannada ksrtc ಕನ್ನಡ ಎಂಇಎಸ್ mes marathi ಕನ್ನಡ ಧ್ವಜ ಮರಾಠಿ kannada flag district news ರಾಜ್ಯೋತ್ಸವ rajyotsava belagavi
Story first published: Monday, November 2, 2009, 12:33 [IST]