ಶೆಟ್ಟರ್ ಮನೆ ಬಾಗಿಲಿಗೆ ಸಿಎಂ ಕುರ್ಚಿ
ರಾಜ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟು ಪರಿಹಾರ ಕಾಣದ ಹಿನ್ನೆಲೆಯಲ್ಲಿ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಲು ಜೈಟ್ಲಿ ನಿರ್ಧಸಿರಿದ್ದಾರೆ. ರೆಡ್ಡಿ ಸಹೋದರರು ಅವರು ಸುಷ್ಮಾ ಸ್ವರಾಜ್ ಅವರ ಕಟ್ಟಾ ಅಭಿಮಾನಿಗಳು. ಅವರಿಂದ ರೆಡ್ಡಿ ಮನವೂಲಿಸುವ ಯತ್ನಕ್ಕೆ ಜೈಟ್ಲಿ ಮನಸ್ಸು ಮಾಡಿದ್ದಾರೆ. ಈ ಕಾರಣಕ್ಕೆ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಿದ್ದಾರೆ. ರೆಡ್ಡಿಗಳು ದೆಹಲಿಗೆ ಬರಲು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಹೇಳಿದ್ದಾರೆ.
ರೆಡ್ಡಿ ಬೆಂಬಲಿಗರು ಎನ್ನಲಾದ ಸುಮಾರು 40 ಶಾಸಕರು ಹೈದರಾಬಾದ್ ಮತ್ತು ಗೋವಾದ ರೆಸಾರ್ಟ್ ವೊಂದರಲ್ಲಿ ಬೀಡುಬಿಟ್ಟಿದ್ದಾರೆ. ನಾಯಕತ್ವ ಬದಲಾವಣೆ ಆಗಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ. ಇನ್ನೊಂದು ಸಂಗತಿಯೆಂದರೆ ಮುಖ್ಯಮಂತ್ರಿ ಸ್ಥಾನ ಜಗದೀಶ್ ಶೆಟ್ಟರ್ ಅವರ ಮನೆಯ ಬಾಗಿಲಿಗೆ ಬಂದು ನಿಂತಿದೆ. ಆದರೆ, ಸೌಮ್ಯವಾದಿ ಎಂದು ಕರೆಸಿಕೊಳ್ಳುತ್ತಿರುವ ಶೆಟ್ಟರ್ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಆದರೆ, ಯಡಿಯೂರಪ್ಪ ಬಗ್ಗೆ ಅವರಿಗೆ ಅಸಮಾಧಾನವಂತೂ ಇರುವುದು ದಿಟ ಎನ್ನುವುದು ಅವರು ಕಳೆದ ಎರಡು ದಿನಗಳಿಂದ ನಡೆದುಕೊಂಡು ವರ್ತನೆಯ ಸಾಕ್ಷಿಯಾಗಿದೆ.
(ದಟ್ಸ್ ಕನ್ನಡ ವಾರ್ತೆ)