ಇನ್ಫಿ ಮೂರ್ತಿ ಸನ್ನಿಧಿಯಿಂದ ವಿಸಿ ನಿಧಿ

ಯುವಕರು ಮತ್ತು ಮೇಧಾವಿಗಳು ಆರಂಭಿಸುವ ಉದ್ದಿಮೆಗಳಿಗೆ ಬಂಡವಾಳ ಒದಗಿಸುವ ಉದ್ದೇಶ ಮೂರ್ತಿ ಅವರದು. ಭಾರತದಲ್ಲೇ ಇರುವ ಉದ್ದಿಮೆದಾರರಿಗೆ ಬಂಡವಾಳ ನೀಡುವ ಉದ್ದೇಶವನ್ನು ಅವರು ಸ್ಥಾಪಿಸುತ್ತಿರುವ ನಿಧಿ ಇಟ್ಟುಕೊಂಡಿರುವುದು ಗಮನಾರ್ಹ. ಮೂಲಭೂತ ಆರೋಗ್ಯ, ಶಿಕ್ಷಣ ಮತ್ತು ಪೊಷ್ಠಿಕತೆ ಕ್ಷೇತ್ರಗಳಲ್ಲಿ ಉದ್ದಿಮೆ ಆರಂಭವಿಸುವ ಯುವಕರಿಗೆ ಆದ್ಯತೆ.
ವೆನ್ಚರ್ ಕ್ಯಾಪಿಟಲ್ ಬಾವಿ ಬತ್ತಿ ಹೋಗಿರುವ ಈ ಋತುವಿನಲ್ಲಿ ಮೂರ್ತಿ ಅವರು ಪ್ರಕಟಿಸಿರುವ ಕ್ರಿಯಾಶೀಲ ಯೋಜನೆ ಮಾರುಕಟ್ಟೆಗೆ ಆಶಾದಾಯಕ ವರ್ತಮಾನವಾಗಿದೆ. ಏನಾದರೂ ಮಾಡುತಿರು ಮಂಕುತಿಮ್ಮ ಎನ್ನುವಂತೆ ಭಾರತದ ಪ್ರಮುಖ ಉದ್ದಿಮೆದಾರ ಮತ್ತು ಕನಸುಗಾರ ಎನ್ ಆರ್ ಎನ್ ಹುಟ್ಟುಹಾಕಿರುವ ಈ ಬಂಡವಾಳ ಯೋಜನೆ ಭಾರತದ ಯುವಕ ಮುಂದಾಳುಗಳಿಗೆ ಆಶಾದಾಯಕ ಸುದ್ದಿಯಾಗಿದೆ. ತೆರೆದ ಬಾವಿಗಳು ಬತ್ತಿರುವಾಗ ಕೊಳವೆ ಬಾವಿ ಕೊರೆದು ಅಂತರ್ಜಲ ಸೇದುವ ಪ್ರಯತ್ನ ಇದಾಗಿದೆ ಎಂದು ಬಣ್ಣಿಸೋಣವೇ ?
( ಅಲ್ಲಿಂದ ಇಲ್ಲಿಂದ)











Click it and Unblock the Notifications