ತುಂಗಭದ್ರಾ ಕಾಲುವೆಗೆ ಟಂಟಂ ಉರುಳಿ ಐವರು ಸಾವು

5 drown in Tungabhadra canal in Bellary district
ಬಳ್ಳಾರಿ, ಅ. 19 : ಜಿಲ್ಲೆಯ ಕೊಳಗಲ್ ಬಳಿ ಕೂಲಿ ಕಾರ್ಮಿಕರಿಂದ ಕೂಡಿದ್ದ ಟಂಟಂ ವಾಹನ ತುಂಗಭದ್ರಾ ಕಾಲುವೆಗೆ ಬಿದ್ದ ಪರಿಣಾಮ ವಾಹನದ ಚಾಲಕ ಮತ್ತು ನಾಲ್ವರು ಮಹಿಳೆಯರು ಸೇರಿದಂತೆ ಐವರು ದುರ್ಮರಣಕ್ಕೀಡಾಗಿದ್ದಾರೆ. ಇಬ್ಬರು ಮಹಿಳೆಯನ್ನು ದಾರಿಹೋಕರು ಪಾರು ಮಾಡಿದ್ದಾರೆ.

ವಾಹನದಲ್ಲಿ ಕೂಲಿಗೆ ತೆರಳುತ್ತಿದ್ದ ಎಂಟು ಮಹಿಳೆಯರಿದ್ದರೆಂದು ತಿಳಿದುಬಂದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದ್ದು ಉಳಿದವರನ್ನು ಹುಡುಕುವ ಯತ್ನ ಸಾಗಿದೆ. ಕಾಲುವೆ ತುಂಬಿ ಹರಿಯುತ್ತಿದೆ ಮತ್ತು ವಿಪರೀತ ಸೆಳವಿರುವುದರಿಂದ ಹುಡುಕುವುದು ಕಷ್ಟವಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ಧನ ರೆಡ್ಡಿ ಮೃತರ ಕುಟುಂಬಕ್ಕೆ 1 ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಇಬ್ಬರು ಮಹಿಳೆಯನ್ನು ಪಾರು ಮಾಡಿದವರಿಗೆ ಕೂಡ ಸನ್ಮಾನ ಮಾಡುವುದಾಗಿ ತಿಳಿಸಿದ್ದಾರೆ. ಕರುಣಾಕರ ರೆಡ್ಡಿ ಮತ್ತು ಸೋಮಶೇಖರ ರೆಡ್ಡಿ ಕೂಡ ಸ್ಥಳಕ್ಕೆ ಆಗಮಿಸಿ ನೀರು ಪಾಲಾದವರನ್ನು ಹುಡುಕುವ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+